Slide
Slide
Slide
previous arrow
next arrow

ಫಸಲು ಬಿಟ್ಟ ಮಾವಿನ ಮರಗಳು ಬೆಂಕಿಗಾಹುತಿ

300x250 AD

ಮುಂಡಗೋಡ: ಯಾರೋ ಕಿಡಗೇಡಿಗಳು ಹಚ್ಚಿದ ಬೆಂಕಿಯಿಂದಾಗಿ ಫಸಲು ಬಿಟ್ಟ 58 ಮಾವಿನ ಮರಗಳು ಸುಟ್ಟು ಸುಮಾರು 1 ಲಕ್ಷಕ್ಕೂ ಅಧಿಕ ಹಾನಿಯಾದ ಘಟನೆ ತಾಲೂಕಿನ ಚವಡಳ್ಳಿ ಗ್ರಾಮದಲ್ಲಿ ನಡೆದಿದೆ.

ಚವಡಳ್ಳಿ ಗ್ರಾಮದ ಯಲ್ಲಪ್ಪ ಹರಿಜನ ಮತ್ತು ಜ್ಯೋತಿ ಮಾನಪ್ಪನವರ ಎಂಬುವರ ಮಾವಿನ ತೋಟ ಬೆಂಕಿಗೆ ಆಹುತಿಯಾಗಿದೆ. ಸರ್ವೆ ನಂ.67 ಹಾಗೂ 6/1 ಹತ್ತಿರ ತ್ಯಾಜ್ಯ ರಾಶಿಗೆ ಯಾರೋ ಕಿಡಗೇಡಿಗಳು ಬೆಂಕಿ ಹಚ್ಚಿ ಹೋಗಿದ್ದಾರೆ. ತ್ಯಾಜ್ಯ ರಾಶಿಯ ಬೆಂಕಿಯೂ ಮಾವಿನ ತೋಟಕ್ಕೆ ವ್ಯಾಪಿಸಿ ಮಾವಿನ ತೋಟಕ್ಕೆ ಬೆಂಕಿ ಆವರಿಸಿ ಫಸಲು ಬಿಟ್ಟಿದ್ದ 58 ಮಾವಿನ ಮರಗಳು ಸುಟ್ಟು ಕರಕಲಾಗಿವೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದವರು ಬೆಂಕಿ ನಂದಿಸಿ ಹೆಚ್ಚಿನ ಅವಘಡವನ್ನು ತಪ್ಪಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top