Slide
Slide
Slide
previous arrow
next arrow

ದಾಂಡೇಲಿ ತಾಲ್ಲೂಕು ಆಡಳಿತ ಸೌಧದಲ್ಲಿ ಶಿವಾಜಿ ಜಯಂತಿ ಆಚರಣೆ

300x250 AD

ದಾಂಡೇಲಿ: ಹಿಂದೂಗಳ ಹೃದಯ ಸಾಮ್ರಾಟ ಶ್ರೀ.ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ಆಚರಿಸಲಾಯಿತು.

ತಹಶೀಲ್ದಾರ್ ಎಂ.ಎನ್. ಮಠದ ಮತ್ತು ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಟಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಜಾಧವ ಹಾಗೂ ಪದಾಧಿಕಾರಿಗಳು ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೊಹಿಮ್‌ಗೆ ತೆರಳಿದ್ದ ನಾಗರಾಜ ರಾಮಚಂದ್ರ ಶಿಂದೆ ಅವರನ್ನು ತಹಶೀಲ್ದಾರ್ ಎಂ.ಎನ್.ಮಠದ ಅವರು ಗೌರವಿಸಿ ಸನ್ಮಾನಿಸಿದರು.

300x250 AD

ಈ ಸಂದರ್ಭದಲ್ಲಿ ಕಂದಾಯ‌ ನಿರೀಕ್ಷಕರಾದ ರಾಘವೇಂದ್ರ ಪಾಟೀಲ್, ಆಹಾರ‌ ನಿರೀಕ್ಷಕರಾದ ಗೋಪಿ ಚೌವ್ಹಾಣ್, ಪ್ರಮುಖರಾದ ರವಿ ಸುತಾರ, ರಾಮಲಿಂಗ ಜಾಧವ, ಮಂಜುನಾಥ, ಪ್ರಶಾಂತ ಹುಲಕೊಪ್ಪಕರ, ಅರುಣ ಕುಂಬಾರ, ನಾಗೇಶ ಪಿಕಳೆ,  ಶೇಖರ, ಲಕ್ಷ್ಮಣ ಜಾಧವ, ನಾಗರಾಜ ಪಾಟೀಲ, ಕಾರ್ತಿಕ ರೇಡೆಕರ ಹಾಗೂ ತಹಶೀಲ್ದಾರ್ ಕಾರ್ಯಾಲಯದ ಮುಕುಂದ್ ಬಸವಮೂರ್ತಿ, ದೀಪಾಲಿ ಪೆಡ್ನೇಕರ್, ಭರತ್, ಗಜು ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top