Slide
Slide
Slide
previous arrow
next arrow

ಗುಂಡಬಾಳಕ್ಕೆ ದೇಶಪಾಂಡೆ ದಂಪತಿ ಭೇಟಿ

300x250 AD

ದಾಂಡೇಲಿ: ಯಕ್ಷಕಾಶಿ ಎಂದೆ ಪ್ರಸಿದ್ಧಿ ಪಡೆದ ಪವಿತ್ರ ಸ್ಥಳವಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಾಮುಖ್ಯತೆ ಪಡೆದ ಗುಂಡಬಾಳದ ಮುಖ್ಯಪ್ರಾಣ ದೇವರು ಶ್ರೀಲಕ್ಷ್ಮೀ ವೆಂಕಟೇಶ್ವರ ಸನ್ನಿಧಾನಕ್ಕೆ ಮಂಗಳವಾರ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆಯವರು ಪತ್ನಿ ರಾಧಾಬಾಯಿಯವರೊಂದಿಗೆ ತೆರಳಿ ಶ್ರೀಸ್ವಾಮಿಯ ದರ್ಶನವನ್ನು ಪಡೆದರು.

ಸಾಮರಸ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಯ ನೆಲೆಯಾದ ಗುಂಡಬಾಳ ಕ್ಷೇತ್ರದ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವರ ದರ್ಶನಾಶೀರ್ವಾದ ಪಡೆದು ವಿಶೇಷ ಪೂಜೆಯನ್ನು ದೇಶಪಾಂಡೆ ದಂಪತಿಗಳು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಆರ್.ವಿ. ದೇಶಪಾಂಡೆಯವರನ್ನು ಗೌರವಿಸಲಾಯಿತು. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ‌ ಬಗ್ಗೆ ಆಡಳಿತ ಮಂಡಳಿಯವರಲ್ಲಿ ದೇಶಪಾಂಡೆಯವರು ಮಾಹಿತಿಯನ್ನು ಪಡೆದುಕೊಂಡರು.

300x250 AD

Share This
300x250 AD
300x250 AD
300x250 AD
Back to top