Slide
Slide
Slide
previous arrow
next arrow

ಹಾವು ಕಡಿದು ಸಾವನ್ನಪ್ಪಿದ ಮಹಿಳೆ ಮನೆಗೆ ಶಾಂತಾರಾಮ್ ಸಿದ್ದಿ ಭೇಟಿ

300x250 AD

ಯಲ್ಲಾಪುರ : ಇತ್ತೀಚಿಗೆ ತಾಲ್ಲೂಕಿನ ಕುಂದರಗಿ ಪಂಚಾಯತ್ ವ್ಯಾಪ್ತಿಯ ಬುಗಡಿಸರದ ಸಿದ್ದಿ ಸಮುದಾಯದ ಮಹಿಳೆ ಯಮುನಾ ಸುರೇಶ್ ಸಿದ್ದಿ ಹಾವು ಕಡಿದು ಅಕಾಲಿಕ ಮರಣ ಹೊಂದಿದ್ದರು. ಇವರ ಮನೆಗೆ ವಿಧಾನ ಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಹಾಗೂ ತಮ್ಮಿಂದ ಕೈಲಾದ ಸಹಾಯದ ಜೊತೆಗೆ ಸರಕಾರದ ಕಡೆಯಿಂದ ಸಿಗಬಹುದಾದ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕುಂದರಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಯಮುನಾ ಸಿದ್ದಿ, ತಾಲೂಕ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಸುಜಾತಾ ಸಿದ್ದಿ, ತಾಲೂಕ ಪಂಚಾಯತ ಮಾಜಿ ಸದಸ್ಯರಾದ ಶ್ರೀ ನಟರಾಜ ಗೌಡ್ರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಪ್ರಮುಖರಾದ ಶ್ರೀ ರಾಘು ಕುಂದರಗಿ, ಗ್ರಾಮಸ್ಥರು ಇನ್ನಿತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top