Slide
Slide
Slide
previous arrow
next arrow

ವಿಷಕಾರಿ ಹಾವು ಕಚ್ಚಿ ರೈತ ಅಸ್ವಸ್ಥ

300x250 AD

ಭಟ್ಕಳ: ಶೇಂಗಾಗದ್ದೆಗೆ ಔಷಧಿ ಸಿಂಪಡಿಸುವಾಗ ವಿಷಕಾರಿ ಹಾವೊಂದು ಕಚ್ಚಿದ ಪರಿಣಾಮ ರೈತನೊರ್ವ ಗಂಭೀರವಾಗಿ ಅಸ್ವಸ್ಥಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸುಮಾರಿಗೆ ನಡೆದಿದೆ.

ಅಸ್ವಸ್ಥಗೊಂಡ ರೈತನನ್ನು ತಾಲೂಕಿನ ಮುರ್ಡೇಶ್ವರ ಬೆದ್ರಮನೆ ನಿವಾಸಿ ರವಿ ಮಂಜುನಾಥ ನಾಯ್ಕ ಎಂದು ತಿಳಿದು ಬಂದಿದೆ. ಈತ ಬೆಳಿಗ್ಗೆ 10.30ರ ಸುಮಾರಿಗೆ ತಮ್ಮ ಶೇಂಗಾ ಬೆಳೆಯುವ ಗದ್ದೆಯಲ್ಲಿ ಔಷಧಿ ಸಿಂಪಡಿಸುವಾಗ ವಿಷಕಾರಿ ಹಾವೊಂದು ಕಚ್ಚಿದೆ. ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿಗೆ ಕಳುಹಿಸಲಾಗಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪ್ರಕರಣ ದಾಖಲಾಗಬೇಕಿದೆ.

300x250 AD

Share This
300x250 AD
300x250 AD
300x250 AD
Back to top