Slide
Slide
Slide
previous arrow
next arrow

ದೇಹದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಕುಮಟಾದ ರುಕ್ಮಾಬಾಯಿ ಕುಟುಂಬ

300x250 AD

ಕಾರವಾರ: ಕುಮಟಾ ನಿವಾಸಿ ದಿ. ರುಕ್ಮಾಬಾಯಿ ದಯಾನಂದ ಪ್ರಭು(75) ಅವರ ದೇಹವನ್ನು ಕುಟುಂಬದವರು ಮೃತರ ಇಚ್ಛೆಯಂತೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾನ ಮಾಡಿದ್ದಾರೆ. ಬುಧವಾರ ಬೆಳಿಗ್ಗೆ ನಿಧನರಾದ ರುಕ್ಮಾಬಾಯಿ ಪ್ರಭು ರುಕ್ಮಾಬಾಯಿ ನಿಧನರಾಗಿದ್ದು, ಅವರ ಮಕ್ಕಳಾದ ನಿರ್ಮಲಾ ಪ್ರಭು ಗಿರಿಧರ ಪ್ರಭು ಮೃತರ ಪಾರ್ಥಿವ ಶರೀರವನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶರೀರ ರಚನಾ ಶಾಸ್ತ್ರ ವಿಭಾಗಕ್ಕೆ ಹಸ್ತಾಂತರಿಸಿದರು. ಪಾರ್ಥಿವ ಶರೀರವನ್ನು ಪ್ರಥಮ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳ ಸಂಶೋಧನೆ ಹಾಗೂ ಅಧ್ಯಯನಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಮೃತರ ಕುಟುಂಬದವರ ಕೊಡುಗೆ ಶ್ಲಾಘನೀಯವಾಗಿದೆ. ಹಾಗೂ ಭವಿಷ್ಯದಲ್ಲಿ ಹಲವು ನಾಗರಿಕರಿಗೆ ದಾನಿಯಾಗಲು ಪ್ರೇರಣೆ ನೀಡುವುದು ಖಚಿತ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮುಖ್ಯ ಆಡಳಿತಾಧಿಕಾರಿ ಟಿ.ಸಿ. ಹಾದಿಮನಿ, ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top