Slide
Slide
Slide
previous arrow
next arrow

ಕೆಡಿಸಿಸಿ ಬ್ಯಾಂಕ್‌ನ ಆರ್ಥಿಕ ಸಾಕ್ಷರತಾ ಕಾರ್ಯಕ್ರಮಕ್ಕೆ ಚಾಲನೆ

300x250 AD

ಶಿರಸಿ: ನಬಾರ್ಡನವರ ಸಹಯೋಗದೊಂದಿಗೆ ಕೆನರಾ ಡಿ.ಸಿ.ಸಿ ಬ್ಯಾಂಕ್ ನಡೆಸುವ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನಗರದ ಟಿ.ಆರ್.ಸಿ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಬಾರ್ಡನ ಡಿ.ಡಿ.ಎಂ. ಇಮ್ಯಾನ್ಯುಯೆಲ್ ರೇಜಿಸ್ ಸಾರ್ವಜನಿಕರಿಗೆ ಹಣಕಾಸು ನಿರ್ವಹಣೆ ಬಗ್ಗೆ ಹಾಗೂ ಸರಕಾರದಿಂದ
ರೈತರಿಗೆ ಸಿಗುವ ವಿವಿಧ ಯೋಜನೆಗಳ ಬಗ್ಗೆ ತಿಳಿಸಿ ಪ್ರತಿಯೊಬ್ಬರೂ ಈ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿ ಈ ಕಾರ್ಯಕ್ರಮದ ಪ್ರಯೋಜನವನ್ನು ಎಲ್ಲಾ ರೈತರು
ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕೆ.ಡಿ.ಸಿ.ಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಆರ್.ಜಿ.ಭಾಗ್ವತ, ಕೆ.ಡಿ.ಸಿ.ಸಿ ಬ್ಯಾಕಿನ ನಿರ್ದೇಶಕ ಹಾಗೂ ಟಿ.ಆರ್.ಸಿ ಅಧ್ಯಕ್ಷರಾದ ರಾಮಕೃಷ್ಣ ಎಸ್. ಹೆಗಡೆ ಕಡವೆ, ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕರುಗಳಾದ ಶ್ರೀಮತಿ ಸುಮಾ ಬಿ. ನಾಯಕ ಹಾಗೂ ಎಸ್. ವಿ. ಕಾಮತ, ಮತ್ತು ಸಹಕಾರಿಗಳಾದ ವಿ.ಆರ್ ಹೆಗಡೆ ಮತ್ತಿಘಟ್ಟಾ ಇವರುಗಳು ಹಾಜರಿದ್ದರು. ಕೆ.ಡಿ.ಸಿ.ಸಿ ಬ್ಯಾಂಕಿನ ಅಧಿಕಾರಿಗಳಾದ ವಿನಾಯಕ ಎನ್. ಹೆಗಡೆ ಆರ್ಥಿಕ ಸಾಕ್ಷರತೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

300x250 AD
Share This
300x250 AD
300x250 AD
300x250 AD
Back to top