Slide
Slide
Slide
previous arrow
next arrow

ವೇದ-ಶಾಸ್ತ್ರಗಳ ರಕ್ಷಣೆ ಇಂದಿನ ಆದ್ಯತೆಯಾಗಲಿ: ಸ್ವರ್ಣವಲ್ಲೀ ಶ್ರೀ

300x250 AD

ಶಿರಸಿ: ವೇದ ಪರಂಪರೆ ಉಳಿಸಿಕೊಂಡು ಮುಂದಿನ ತಲೆಮಾರಿಗೆ ದಾಟಿಸಬೇಕಾದುದು ಎಲ್ಲ ವಿದ್ವಾಂಸರ ಜವಾಬ್ದಾರಿ. ಅದೇ ರೀತಿ ವೇದಗಳ ಸಂರಕ್ಷಣೆಯಲ್ಲಿ ಮಾತೆಯರ ಜವಾಬ್ದಾರಿಯೂ ದೊಡ್ಡದಾಗಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಅವರು ತಾಲೂಕಿನ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಸೋಮವಾರ ನಡೆದ ದಕ್ಷಿಣ ಭಾರತ ಮಟ್ಟದ ಕ್ಷೇತ್ರೀಯ ವೇದ ಸಮ್ಮೇಳನದ ಸಮಾರೋಪದಲ್ಲಿ ಅವರು ಆಶೀರ್ವದಿಸಿದರು. ಸಮಾಜ ಹರಿಯುವ ನದಿ ಇದ್ದಂತೆ. ನದಿಗಳಿಗೆ ಆಗಾಗ ಕಲ್ಮಷಗಳೂ ಸೇರ್ಪಡೆಗೊಳ್ಳುತ್ತವೆ. ಈ ಕಲ್ಮಶಗಳನ್ನು ಆಗಾಗ ಸ್ವಚ್ಛಗೊಳಿಸುವಂತೆ ಕಲ್ಮಷವಾದ ಸಮಾಜವನ್ನು ಶುದ್ಧೀಕರಿಸುವುದು ವೇದಗಳಿಂದ ಸಾಧ್ಯ. ವೇದಗಳ ಮತ್ತು ಅವುಗಳ ಜೊತೆ ಇರುವ ಶಾಸ್ತ್ರಗಳ ರಕ್ಷಣೆ ಇಂದಿನ ಅಗತ್ಯತೆಯಾಗಿದೆ. ಸಮಾಜ ಆಗಾಗ ಶುದ್ಧೀಕರಣಕ್ಕೆ ವೇದ ಬೇಕು ಎಂದರು. ಇತ್ತೀಚೆಗೆ ಪರಿಸರವೂ ಸಹ ನಗರೀಕರಣ, ಕಾರ್ಖಾನೆಗಳಿಂದ ಕಲ್ಮಷವಾಗುತ್ತಿವೆ. ಈ ಪರಿಸರ ಕಲ್ಮಷದಿಂದ ಒಝೋನ್ ಪದರ ರಂದ್ರಗಳಾಗುತ್ತಿವೆ. ಯಜ್ಞಗಳಿಂದ ರಂದ್ರವಾಗಿರುವ ಓಝೋನ್ ಪದರಗಳನ್ನೂ ಸರಿಪಡಿಸಲು ಸಾಧ್ಯ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ ಎಂದರು.
ಇತಿಹಾಸ ಮತ್ತು ಪುರಾಣಗಳ ಮೂಲಕವೇ ವೇದಗಳನ್ನು ನೋಡಬೇಕು. ತಿಳಿದ ವ್ಯಕ್ತಿಗಳೊಂದಿಗೆ ಚರ್ಚೆ ಮಾಡುವುದರಿಂದ ನಮಗೆ ವೇದದ ಜ್ಞಾನ ಸಹ ಜಾಸ್ತಿ ಆಗುತ್ತದೆ. ಎಂದರು. ಕೂಡಲಿ ಶೃಂಗೇರಿ ಮಹಾ ಸಂಸ್ಥಾನದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಮಾತನಾಡಿ, ಎನ್ಇಟಿ ಶಿಕ್ಷಣ ಪದ್ಧತಿ ನಮಗೆ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ವಿದ್ವಾಂಸರು ಇರಬಾರದು. ಈ ಶಿಕ್ಷಣ ಪದ್ಧತಿಯ ಬಗ್ಗೂ ಪರಾಮರ್ಶೆ ಮಾಡಬೇಕು ಎಂದರು. ಉಜ್ಜಯನಿಯ ಸಂಸ್ಕೃತ ವಿದ್ವಾಂಸ ಪ್ರಫುಲ್ಲಕುಮಾರ ಮಿಶ್ರಾ ಮಾತನಾಡಿ, ಇಂದು ಆಧುನಿಕ ಶಿಕ್ಷಣ ಅಗತ್ಯ. ಅದನ್ನು ಕಲಿಯೋಣ, ಆದರೆ ನಮ್ಮ ಮೂಲ ಜ್ಞಾನವನ್ನು ಎಂದಿಗೂ ಮರೆಯಬಾರದು ಎಂದರು.

300x250 AD

ಉಜ್ವಯನಿಯ ವಿದ್ವಾಂಸ ವಿರೂಪಾಕ್ಷ ಜಡ್ಡಿಪಾಲ ಮಾತನಾಡಿ, ಸಾವಿರ ವರ್ಷಗಳ ಇತಿಹಾಸ ನೋಡಿದರೂ ವೇದಾಧ್ಯನ ಅವಕಾಶಗಳು ಸಂಕುಚಿತಗೊಂಡಿದೆ. ವೇಧದ ಅಧ್ಯಯನ ಕಡಿಮೆ ಆದಂತೆ ದೇಶದ ಸುರಕ್ಷತೆಗೂ ಅಡಚಣೆ ಆಗಿದೆ. ಭಾರತೀಯ ಜ್ಞಾನ ಪರಂಪರೆಗೆ ಮೂಲ ವೇದ. ನಮ್ಮ ದೇಶ ಒಂದು ಕಾಲದಲ್ಲಿ ಜ್ಞಾನದ ಮೂಲವಾಗಿತ್ತು. ಜ್ಞಾನ ಮತ್ತು ಪ್ರಯೋಗ ನಮ್ಮ ಮೂಲ ತಂತ್ರವಾಗಿತ್ತು. ಜ್ಞಾನ ಸಮುದ್ರದ ಆಚೆಯ ದೇಶಗಳಿಂದ ಬಂದಿದೆ ಎಂಬ ನಮ್ಮ ಭ್ರಮೆಯನ್ನು ದೂರಗೊಳಿಸಬೇಕಿದೆ ಎಂದರು.
ಬೆಂಗಳೂರಿನ ವೇದಬ್ರಹ್ಮ ಗೋವಿಂದಪ್ರಕಾಶ ಘನಪಾಠಿ, ವೇದಬ್ರಹ್ಮ ಕುಂಜಬಿಹಾರಿ ಉಪಾಧ್ಯಾಯ ಅವರನ್ನು ಸ್ವರ್ಣವಲ್ಲೀ ಶ್ರೀಗಳು ಸನ್ಮಾನಿಸಿದರು. ಮಠದ ಉಪಾಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ ಇದ್ದರು.

Share This
300x250 AD
300x250 AD
300x250 AD
Back to top