Slide
Slide
Slide
previous arrow
next arrow

ಸುಗಮ ಸಂಚಾರಕ್ಕೆ ಬಿಡಾಡಿ ದನಕರು ಅಡ್ಡಿ

300x250 AD

ದಾಂಡೇಲಿ: ನಗರದಲ್ಲಿ ದಿನದಿಂದ ದಿನಕ್ಕೆ ಬಿಡಾಡಿ ದನಕರುಗಳ ಸಂಖ್ಯೆಗಳು ಏರಿಕೆಯಾಗಿ ಬಹುದೊಡ್ಡ ಸಮಸ್ಯೆಯಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲೇ ಬಿಡಾಡಿ‌ ದನಕರುಗಳು ಅಡ್ಡಾದಿಡ್ಡಿಯಾಗಿ ಓಡಾಡುತ್ತಿರುವುದು ಮಾತ್ರವಲ್ಲದೇ ನಡುರಸ್ತೆಯಲ್ಲೇ ಮಲಗುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗತೊಡಗಿದೆ.

ಪ್ರತಿದಿನವೂ ಬಿಡಾಡಿ ದನ ಕರುಗಳ ಹಾವಳಿಯಿಂದಾಗಿ ಅಪಘಾತಗಳು ನಡೆಯುವಂತಾಗಿದೆ. ಸಾಕಷ್ಟು ಬಾರಿ ದ್ವಿಚಕ್ರ ವಾಹನ ಸವಾರರು ಬಿದ್ದು ಕೈ, ಕಾಲು ಗಾಯ ಮಾಡಿಕೊಂಡಿರುವ ಘಟನೆಗಳು ನಡೆದಿವೆ. ಶುಕ್ರವಾರ ರಾತ್ರಿಯೂ ಬಿಡಾಡಿ ದನವನ್ನು ರಕ್ಷಿಸಲು ಹೋಗಿ ಟ್ರಕ್ಕೊಂದು ಸಿಸಿ ಕ್ಯಾಮರಾ ಕಂಬಕ್ಕೆ ಡಿಕ್ಕಿ ಹೊಡೆದು ದಂಡ ಕಟ್ಟಿಸಿಕೊಂಡ ಘಟನೆ ನಡೆದಿದ್ದು, ಕೆ.ಸಿ‌.ವೃತ್ತದ ಹತ್ತಿರ ನಡು ರಸ್ತೆಯಲ್ಲಿ ಮಲಗಿದ ದನಕರುಗಳಿಂದ ಇಂತಹ ಘಟನೆಗಳು ಮರುಕಳಿಸುವಂತಿದೆ.

ನಗರದಲ್ಲಿ ಏರುತ್ತಿರುವ ಬಿಡಾಡಿ ದನಕರುಗಳನ್ನ ಹಿಡಿದು ಹಳಿಯಾಳ ತಾಲೂಕಿನ ದುಸಗಿಯಲ್ಲಿರುವ ಗೋಶಾಲೆಗೆ ಕಳುಹಿಸುವ ಬಗ್ಗೆ ನಗರಸಭೆ ಚಿಂತನೆಯನ್ನು‌ ನಡೆಸಿತ್ತು. ಇನ್ನಾದರೂ ಬಿಡಾಡಿ ದನ ಕರುಗಳ ನಿಯಂತ್ರಣಕ್ಕೆ ನಗರಸಭೆ ಸೇರಿದಂತೆ ಸಂಬಂಧಪಟ್ಟ ಇಲಾಖೆಯವರು ತ್ವರಿತ ಕ್ರಮವನ್ನು ಕೈಗೊಳ್ಳಬೇಕಾಗಿದೆ.

300x250 AD

Share This
300x250 AD
300x250 AD
300x250 AD
Back to top