Slide
Slide
Slide
previous arrow
next arrow

ಬೈಕ್‌ಗೆ ಕಾರ್ ಡಿಕ್ಕಿ: ಓರ್ವ ಸಾವು

300x250 AD

ಯಲ್ಲಾಪುರ: ತಾಲೂಕಿನ ದೇಶಪಾಂಡೆ ನಗರ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಕಲಘಟಗಿ ಕಡೆಯಿಂದ ಯಲ್ಲಾಪುರದೆಡೆಗೆ ವೇಗವಾಗಿ ಬರುತ್ತಿದ್ದ ಕಾರು ಟ್ಯಾಂಕರ್ ಅನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ಎದುರಿನಿಂದ ಬಂದ ಬೈಕಿಗೆ ಕಾರು ಡಿಕ್ಕಿಯಾಗಿದೆ.

300x250 AD

ಡಿಕ್ಕಿಯಾದ ರಭಸಕ್ಕೆ ಬೈಕಿನ ಹಿಂಬದಿ ಸವಾರ ಕಲಘಟಗಿಯ ಮಲಕಿನಕೊಪ್ಪ ನಿವಾಸಿ, ಕೂಲಿ ಕೆಲಸದ ಭಾಷಾ ಸಾಬ್ ರುಸ್ತುಮ್ ಸಾಬ್ ಮುಲ್ಲಾನವ‌ರ್ ರಸ್ತೆಯ ಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್‌ ಚಾಲಕ ನಾಗಪ್ಪ ಅಳವಡಿ ಎಂಬಾತನಿಗೂ ಗಾಯವಾಗಿದೆ. ಕಾರು ಚಾಲಕ ಯಲ್ಲಾಪುರದ ಶ್ರೀನಿವಾಸ ಗಣಪತಿ ಪಟಗಾರ್ ಎಂಬಾತನಿಗೂ ಗಾಯವಾಗಿದ್ದು, ಕಾರು ಚಾಲಕನ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top