Slide
Slide
Slide
previous arrow
next arrow

ಸಿ.ಸಿ ಕ್ಯಾಮೆರಾ ಕಂಬಕ್ಕೆ ಅಶೋಕ್ ಲೇಲ್ಯಾಂಡ್ ವಾಹನ ಡಿಕ್ಕಿ

300x250 AD

ದಾಂಡೇಲಿ : ನಡು ರಸ್ತೆಯಲ್ಲಿದ್ದ ಬಿಡಾಡಿ ಆಕಳನ್ನು ರಕ್ಷಿಸಲು ಹೋದ ಅಶೋಕ್ ಲೇಲ್ಯಾಂಡ್ ವಾಹನವೊಂದು ಸಿ.ಸಿ ಕ್ಯಾಮೆರಾವಿರುವ ಕಂಬಕ್ಕೆ‌ ಗುದ್ದಿ, ಹಾನಿ‌ ನಡೆದಿರುವ ಘಟನೆ ಗುರುವಾರ ಸಂಜೆ ನಗರದ ಕೆ.ಸಿ.ವೃತ್ತದಲ್ಲಿ ನಡೆದಿದೆ.

ಹಳಿಯಾಳ ರಸ್ತೆಯಿಂದ ಬರ್ಚಿ ರಸ್ತೆಗೆ ತಿರುಗುವ ಸಂದರ್ಭದಲ್ಲಿ ಅಶೋಕ್ ಲೇಲ್ಯಾಂಡ್ ವಾಹನವೊಂದು ನಡು ರಸ್ತೆಯಲ್ಲಿದ್ದ ಬಿಡಾಡಿ ಆಕಳನ್ನು ರಕ್ಷಿಸಲು ಹೋಗಿ, ಕೆ.ಸಿ.ವೃತ್ತದ ಹತ್ತಿರವಿದ್ದ ಸಿ.ಸಿ ಕ್ಯಾಮೆರಾ ಅಳವಡಿಸಿರುವ ಕಂಬಕ್ಕೆ ಗುದ್ದಿ, ಕಂಬ ಸೇರಿದಂತೆ ಸಿ.ಸಿ ಕ್ಯಾಮೆರಾಕ್ಕೂ ಹಾನಿ ಮಾಡಿದೆ. ಈ ಸಂದರ್ಭದಲ್ಲಿ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಎಎಸ್ಐ ನಾರಾಯಣ ರಾಥೋಡ್ ಹಾಗೂ ಪೊಲೀಸ್ ಸಿಬ್ಬಂದಿಗಳು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಅಪಘಾತ ಪಡಿಸಿದ ವಾಹನವನ್ನು ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟರು.

300x250 AD

ಸ್ಥಳಕ್ಕೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದೀಪಕ್ ನಾಯಕ, ಹೆಸ್ಕಾಂ‌ ಶಾಖಾಧಿಕಾರಿ ಪರಶುರಾಮ ಉಪ್ಪಾರ್ ಮತ್ತು ಹೆಸ್ಕಾಂ ಸಿಬ್ಬಂದಿಗಳು ಭೇಟಿ‌ ನೀಡಿದ್ದಾರೆ.

Share This
300x250 AD
300x250 AD
300x250 AD
Back to top