Slide
Slide
Slide
previous arrow
next arrow

ಬೈಕ್ ಸ್ಕಿಡ್: ಸವಾರರಿಗೆ ಗಾಯ

300x250 AD

ದಾಂಡೇಲಿ : ಬೆಳಗಾವಿಯಿಂದ ಶ್ರೀಕ್ಷೇತ್ರ ಉಳವಿಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕಾರನ್ನು ತಪ್ಪಿಸಲು ಹೋಗಿ ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಬಿದ್ದು, ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರನಿಗೆ ಗಾಯವಾದ ಘಟನೆ ಭಾನುವಾರ ನಗರದ ಸಮೀಪದ ಜೋಯಿಡಾ ತಾಲ್ಲೂಕಿನ ಬಾಪೇಲಿ ಕ್ರಾಸ್ ಎಂಬಲ್ಲಿ ನಡೆದಿದೆ.

ಬೆಳಗಾವಿಯ ಕೆ.ಕೆ.ಕೊಪ್ಪ‌ ಗ್ರಾಮದ‌ ನಿವಾಸಿ ಭರತ್ ಹಾಗೂ ಆತನ ಗೆಳೆಯನಾದ ಬೆಳಗಾವಿಯ ಮೊಹರೆ ಗ್ರಾಮದ ನಿವಾಸಿ ಬಸವರಾಜ ಚೆನ್ನಪ್ಪ ಪಟ್ಟಣಶೆಟ್ಟಿ ಎಂಬಿಬ್ಬರು ಬೆಳಗಾವಿಯಿಂದ ಶ್ರೀ ಕ್ಷೇತ್ರ ಉಳವಿಗೆ ಪ್ರಯಾಣ ಬೆಳೆಸಿದ್ದರು. ಜೋಯಿಡಾ ತಾಲೂಕಿನ ಬಾಪೇಲಿ ಕ್ರಾಸ್ ಎಂಬಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಕಾರನ್ನು ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದಿದೆ. ಈ ಸಮಯದಲ್ಲಿ ಸವಾರ ಭರತ್ ಹಾಗೂ ಹಿಂಬದಿ ಸವಾರ ಬಸವರಾಜ ಎಂಬಿಬ್ಬರಿಗೂ ಗಾಯವಾಗಿದೆ.

300x250 AD

ತಕ್ಷಣವೇ ಸ್ಥಳಕ್ಕೆ ಆಗಮಿಸಿದ 108 ಆಂಬುಲೆನ್ಸ್ ವಾಹನವು ಇವರಿಬ್ಬರನ್ನು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

Share This
300x250 AD
300x250 AD
300x250 AD
Back to top