Slide
Slide
Slide
previous arrow
next arrow

ಬಸ್ಸಿನಲಿಟ್ಟಿದ್ದ ಬ್ಯಾಗ್ ನಾಪತ್ತೆ; ಪ್ರಕರಣ ದಾಖಲು

300x250 AD

ಜೋಯಿಡಾ: ಗೋವಾಕ್ಕೆ ಹೋಗಿ ಹಿಂದಿರುಗಿ ಬರುತ್ತಿದ್ದಾಗ ಬಸ್ಸಿನ ಸೀಟಿನಲ್ಲಿಟ್ಟಿದ್ದ ಹಣವಿದ್ದ ಬ್ಯಾಗೊಂದು ನಾಪತ್ತೆಯಾಗಿರುವ ಘಟನೆ ಜೋಯಿಡಾ ತಾಲೂಕಿನ ಅನ್ಮೋಡಾ ಅಬಕಾರಿ ತನಿಖಾ ಠಾಣೆಯ ಹತ್ತಿರ ನಡೆದಿರುವುದರ ಬಗ್ಗೆ ಗುರುವಾರ ಮಾಹಿತಿ ಲಭ್ಯವಾಗಿದೆ.

ಧಾರವಾಡ ತಾಲೂಕಿನ ಕೇಲಗೇರಿ ನಿವಾಸಿ ಬಸನಗೌಡ ಫಕೀರಗೌಡ ಸಿದ್ದಾಪುರ ಎಂಬವರೇ ರೂ.1,20,000 ಹಣವನ್ನು ಕಳೆದುಕೊಂಡ ದುರ್ದೈವಿಯಾಗಿದ್ದಾರೆ. ಇವರು ಗೆಳೆಯನ ಜೊತೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲೆಂದು ಗೋವಾಕ್ಕೆ ಹೋಗಿ, ಕಾರು ಖರೀದಿಸದೇ ಅಲ್ಲಿಂದ ಬಸ್ ಮೂಲಕ ಬರುತ್ತಿದ್ದಾಗ, ಅನ್ಮೋಡಾ ಅಬಕಾರಿ ತನಿಖಾ ಠಾಣೆಯ ಹತ್ತಿರ ವಾಹನ ಪರಿಶೀಲನೆಗಾಗಿ ನಿಲ್ಲಿಸಿದ್ದ ಸಂದರ್ಭದಲ್ಲಿ ಇವರು ತಾನು ಕುಳಿತ ಸೀಟಿನಲ್ಲಿ ಹಣದ ಚೀಲವನ್ನು ಇಟ್ಟು ಕೆಳಗಿಳಿದಿದ್ದರು. ಸ್ವಲ್ಪ ಹೊತ್ತಿನಲ್ಲಿ ಬಸ್ಸನ್ನು ಹತ್ತಿ ಸೀಟಿನ ಹತ್ತಿರ ಬಂದಾಗ ಹಣವಿದ್ದ ಚೀಲ ನಾಪತ್ತೆಯಾಗಿದೆ.

300x250 AD

ನಾಪತ್ತೆಯಾಗಿರುವ ಹಣದ ಚೀಲವನ್ನು ಪತ್ತೆ ಮಾಡಿ ಕೊಡುವಂತೆ ಬಸನಗೌಡ ಫಕೀರಗೌಡ ಸಿದ್ದಾಪುರ ಅವರು ರಾಮನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ

Share This
300x250 AD
300x250 AD
300x250 AD
Back to top