Slide
Slide
Slide
previous arrow
next arrow

ಚಂದನ ಪ್ರೌಢಶಾಲಾ ಶಿಕ್ಷಕರಿಗೆ ಡಾ.ಎಚ್.ಎಫ್.ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ಪ್ರಶಸ್ತಿ

300x250 AD

ಶಿರಸಿ: ಡಾ. ಎಚ್ ಎಫ್ ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನದವರು 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ವಿಷಯವಾರು ಅಧಿಕ ಶೇಕಡಾವಾರು ಅಂಕ ಪ್ರಮಾಣಕ್ಕೆ ನೀಡುವ “ ಶಿಕ್ಷಣ ಪರಿಶ್ರಮ ಹಿರಿಮೆ ” ಗೌರವ ಪುರಸ್ಕಾರಕ್ಕೆ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶಿಕ್ಷಕರು ಭಾಜನರಾಗಿದ್ದಾರೆ.

ಡಿ.27ರಂದು ಯಲ್ಲಾಪುರದಲ್ಲಿ ಡಾ. ಎಚ್ ಎಫ್ ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ,ಅಪರ ಆಯುಕ್ತರ ಕಛೇರಿ ಸಾ.ಶಿ ಇಲಾಖೆ ಧಾರವಾಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಶಿರಸಿ ಇವರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಂಧೂರ್ ಭಟ್ (ಹಿಂದಿ), ದಿವ್ಯಾ ಹೆಗಡೆ(ಸಮಾಜ ವಿಜ್ಞಾನ) ಹಾಗೂ ಕಳೆದ ವರ್ಷ ಚಂದನ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈಗ ಸರಕಾರಿ ಶಾಲೆಯ ಶಿಕ್ಷಕರಾಗಿ ಆಯ್ಕೆಯಾಗಿರುವ ಸೌಮ್ಯ ಎನ್(ಗಣಿತ) ,ದೇವರಾಜ ಬಿ(ವಿಜ್ಞಾನ) ಇವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 6 ವಿಷಯಗಳಲ್ಲಿ 4 ವಿಷಯಗಳಿಗೆ ಚಂದನ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಭಾಜನರಾಗಿರುವುದು ಹೆಮ್ಮೆಯ ವಿಷಯವಾಗಿದೆ.

300x250 AD

ಪುರಸ್ಕೃತ ಶಿಕ್ಷಕರಿಗೆ ಆಡಳಿತ ಮಂಡಳಿ,ಶಿಕ್ಷಕರು,ಪಾಲಕರು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Share This
300x250 AD
300x250 AD
300x250 AD
Back to top