Slide
Slide
Slide
previous arrow
next arrow

ಪಿಂಚಣಿ ಅದಾಲತ್: ಅರ್ಜಿ ಸ್ವೀಕಾರ, ಮಂಜೂರಾತಿ ಪತ್ರ ವಿತರಣೆ

300x250 AD

ಹೊನ್ನಾವರ: ತಾಲೂಕಿನ ಹಳದಿಪುರದ ಆರ್.ಈ.ಎಸ್. ಪ್ರೌಢಶಾಲೆ ಸಭಾಭವನದಲ್ಲಿ ಕಂದಾಯ ಇಲಾಖೆಯ ನೇತೃತ್ವದಲ್ಲಿ ಗುರುವಾರ ಪಿಂಚಣಿ ಅದಾಲತ್ ನಡೆಯಿತು.

ಹೊನ್ನಾವರ ಹೋಬಳಿಯ ಹಳದಿಪುರ ಕಂದಾಯ ಗ್ರಾಮ ವ್ಯಾಪ್ತಿಯಲ್ಲಿನ ಪಿಂಚಣಿ ಅದಾಲತ್ ಮೂಲಕ ಹೊಸ ಅರ್ಜಿಗಳನ್ನು ಸ್ವೀಕರಿಸಿ, ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಮಂಜೂರಾತಿ ಪತ್ರ ನೀಡಲಾಯಿತು. ನಿರ್ಗತಿಕ ವಿಧವಾ ವೇತನ, ಇಂದಿರಾಗಾಂಧಿ ವೃದ್ದಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ವೇತನಕ್ಕೆ 12 ಹೊಸ ಅರ್ಜಿಗಳನ್ನು ಸ್ವೀಕರಿಸಲಾಯಿತು. ಹಾಗೂ ಈ ಮೊದಲೇ ಅರ್ಜಿ ಹಾಕಿದ 15 ಪಿಂಚಾಣಿದಾರರಿಗೆ ಮಂಜೂರಾತಿ ಪತ್ರ ನೀಡಲಾಯಿತು.

300x250 AD

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಮಹೇಶ್ ನಾಯ್ಕ, ಗ್ರೇಡ್ 2 ತಶಿಲ್ದಾರ್ ಉಷಾ ಪಾವಸ್ಕರ್, ಆರ್. ಈ.ಎಸ್ ಕಾಲೇಜಿನ ಪ್ರಾಂಶುಪಾಲರಾದ ವಿ.ಎಸ್.ನಾಯ್ಕ, ಕಂದಾಯ ನಿರೀಕ್ಷಕರಾದ ಮಹೇಂದ್ರ ಗೌಡ ಹಾಗೂ ಗ್ರಾಮ ಆಡಳಿತಾಧಿಕಾರಿಗಳಾದ ವೈಭವಿ ಭಂಡಾರಿ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top