Slide
Slide
Slide
previous arrow
next arrow

ಬೈಕ್ ಡಿಕ್ಕಿ: ಪ್ರವಾಸಿಗ ಸಾವು

300x250 AD

ಹೊನ್ನಾವರ: ಪ್ರವಾಸಕ್ಕೆಂದು ಚಿತ್ರದುರ್ಗದಿಂದ ಆಗಮಿಸಿದ ವ್ಯಕ್ತಿಯೊರ್ವರು ಕಾಸರಕೋಡ ಸಮೀಪ ದ್ವಿಚಕ್ರ ವಾಹನ ಡಿಕ್ಕಿಯಾಗಿ ಮೃತಪಟ್ಟ ಘಟನೆ ಸಂಭವಿಸಿದೆ‌.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗಾ ತಾಲೂಕಿನ ಬೆಲಗೂರು ಗ್ರಾಮದ ರಾಮಕೃಷ್ಣ ಎನ್ನುವವರು 43 ಜನರೊಂದಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಪ್ರವಾಸಕ್ಕೆಂದು ಬಂದವರು ಜಿಲ್ಲೆಯ ಮುರ್ಡೇಶ್ವರ ಅಪ್ಸರಕೊಂಡ ಪ್ರವಾಸ ಮುಗಿಸಿ ರೋಷನ್ ಮುಹಲ್ಲಾ ಹತ್ತಿರ ಇರುವ ಶ್ಯಾನಭಾಗ ರೆಸಿಡೆನ್ಸಿಯಲ್ಲಿ ವಾಸ್ಯವ್ಯ ಮಾಡಿದ್ದರು. ವಾಯುವಿಹಾರಕ್ಕಾಗಿ ತನ್ನ ಸ್ನೇಹಿತನೊಂದಿಗೆ ತೆರಳಿದ ರಾಮಕೃಷ್ಣ ಇವರಿಗೆ ಹೊನ್ನಾವರ ಕಡೆಯಿಂದ ಮಂಕಿ ಕಡೆಗೆ ಅತಿವೇಗದಿಂದ ಬಂದ ದ್ವಿಚಕ್ರ ವಾಹನ ಡಿಕ್ಕಿಯಾಗಿದೆ. ಬೈಕ ಸವಾರ ಮಂಕಿ ಮಾವಿನಕಟ್ಟೆಯ ನಾಗೇಶ ನಾಯ್ಕ ಇವರಿಗೆ ತಲೆ ಹಾಗೂ ಕೈ ಕಾಲು ಭಾಗಗಳಿಗೆ ಗಂಭೀರ ಗಾಯವಾಗಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top