Slide
Slide
Slide
previous arrow
next arrow

ಡಿ.23ಕ್ಕೆ ‘ಚಂದನ ವಾರ್ಷಿಕ ಹಬ್ಬ’

300x250 AD

ಶಿರಸಿ: ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ಇದರ ಚಂದನ ವಾರ್ಷಿಕ ಹಬ್ಬ ಡಿ.23, ಶನಿವಾರ ಬೆಳಿಗ್ಗೆ 10.30ಕ್ಕೆ ಚಂದನ ಶಾಲಾ ಆವಾರದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟಕರಾಗಿ ಸಿದ್ದಾಪುರ ಶಂಕರ ಮಠದ ಧರ್ಮದರ್ಶಿ ವಿಜಯ ಹೆಗಡೆ ದೊಡ್ಮನೆ ಆಗಮಿಸಲಿದ್ದು, ಉದ್ಯಮಿ ವಿನಯ್ ಶಿಂಧೆ ಬಹುಮಾನ ವಿತರಣೆ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಯಾರ್ಡ್ಸ್ ಅಧ್ಯಕ್ಷ ಎಸ್.ಆರ್.ಹೆಗಡೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿ.ಪಂ.ಮಾಜಿ ಸದಸ್ಯರಾದ ಜಿ.ಎನ್.ಹೆಗಡೆ ಮುರೆಗಾರ್,ಉಷಾ ಹೆಗಡೆ, ನರೇಬೈಲ್ ಗ್ರೂ.ಗ್ರಾ.ಸೇ.ಸ.ಸಂ.ದೊಡ್ನಳ್ಳಿ ಅಧ್ಯಕ್ಷ ಎಸ್.ಎನ್.ಹೆಗಡೆ ದೊಡ್ನಳ್ಳಿ, ಗ್ರಾ.ಪಂ.ಅಧ್ಯಕ್ಷ ತಿರುಮಲೇಶ್ವರ ಮಡಿವಾಳ, ಸದಸ್ಯ ರಘುಪತಿ ನಾಯ್ಕ್,ತಾ.ಪಂ ಮಾಜಿ ಸದಸ್ಯೆ ರತ್ನಾ ಶೆಟ್ಟಿ ಉಪಸ್ಥಿತರಿರಲಿದ್ದಾರೆ. ಮಧ್ಯಾಹ್ನ 2.30 ರಿಂದ ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಲಿದ್ದು, ಸರ್ವರೂ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top