Slide
Slide
Slide
previous arrow
next arrow

ಭೈರುಂಬೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಸುರೇಶ್ಚಂದ್ರ ಕೆಶಿನ್ಮನೆ ಆಯ್ಕೆ

300x250 AD

ಶಿರಸಿ: ಹಾಲು ಉತ್ಪಾದಕರ ಸಹಕಾರ ಸಂಘ, ಭೈರುಂಬೆ ಇದರ ಅಧ್ಯಕ್ಷರಾಗಿ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಉಪಾಧ್ಯಕ್ಷರಾಗಿ ಇಂದಿರಾ ಗೋಪಾಲ ಹೆಗಡೆ ಗುಂಡಿಗದ್ದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ ಎರಡು ಅವಧಿಗೆ ಕ್ರೀಯಾಶೀಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಕೆಶಿನ್ಮನೆ ಇವರನ್ನು ಸತತ ಮೂರನೇ ಅವಧಿಗೆ ಸಂಘದ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.

ಜೊತೆಗೆ ಸಂಘದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳೆಯೊರ್ವಳು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಇಲ್ಲಿ ಉಲ್ಲೇಖನಿಯವಾಗಿದೆ. ಇನ್ನುಳಿದಂತೆ ಸಂಘದ ನಿರ್ದೇಶಕರಾಗಿ ಮಹಾಬಲೇಶ್ವರ ಹೆಗಡೆ ಗಡಿಕೈ, ಗಜಾನನ ನರಸಿಂಹ ಹೆಗಡೆ, ಗಜಾನನ ಕೃಷ್ಣ ಹೆಹಡೆ ಮುಳಕಿನಕೊಪ್ಪ, ದತ್ತಾತ್ರೇಯ ಹೆಗಡೆ ಗಲ್ಲದಮನೆ, ದತ್ತಾತ್ರೇಯ ಕೃಷ್ಣ ಹೆಗಡೆ ಭೈರುಂಬೆ, ರವಿ ಗಜಾನನ ಹೆಗಡೆ ಹುಳಗೋಳ, ಸುನಂದಾ ನರಸಿಂಹ ಹೆಗಡೆ ಕಾರೇಕೊಪ್ಪ, ಗಣಪತಿ ಗೌಡ ದೊಡ್ಡಬೈಲು, ಮಹೇಶ ಚಲುವಾದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

300x250 AD

ಸಂಘದ ಅಧ್ಯಕ್ಷರಾಗಿರುವ ಸುರೇಶ್ಚಂದ್ರ ಕೆಶಿನ್ಮನೆ ಧಾರವಾಡ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಸಂಘಕ್ಕೆ ಹೆಮ್ಮೆಯ ಸಂಗತಿಯಾಗಿದೆ.

Share This
300x250 AD
300x250 AD
300x250 AD
Back to top