Slide
Slide
Slide
previous arrow
next arrow

ವ್ಯಕ್ತಿಯ ಮೇಲೆ ಹಲ್ಲೆ : ಪ್ರಕರಣ ದಾಖಲು

300x250 AD

ಹೊನ್ನಾವರ: ತಾಲೂಕಿನ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಮೇಲಿನ ಇಡಗುಂಜಿಯ ಕುಳಿಮನೆ ಕ್ರಾಸ್ ಬಳಿ ವ್ಯಕ್ತಿಯೊಬ್ಬರಿಗೆ ರಾಡ್‌ನಿಂದ ಹೊಡೆದು ಹಲ್ಲೆ ನಡೆಸಿದ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಳಕೂರು ಕೆಳಗಿನ ಕೇರಿಯ ವಿನಾಯಕ ನಾಯ್ಕ ದೂರು ನೀಡಿದ್ದು, ತನ್ನ ಗೆಳೆಯ ಹಾಮಕ್ಕಿ ಅಂಬಿಗರ ಕೇರಿಯ ಗಣೇಶ ಕಮಲಾಕರ ಅಂಬಿಗನ ಜೊತೆ ಮಾತನಾಡುತ್ತ ನಿಂತಿದ್ದಾಗ, ಇಡಗುಂಜಿ ಬೈಲಾರ ಕೇರಿಯ ರಾಜೇಶ ಧರ್ಮ ನಾಯ್ಕ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ಗಣೇಶ ಅಂಬಿಗನನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈಯ್ಯತ್ತಿರುವಾಗ ಆತನ ಅಣ್ಣ ಉದಯ ಧರ್ಮ ನಾಯ್ಕ ಬೈಕ್‌ನಲ್ಲಿ ಬಂದು ಆತನ ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ. ಈ ಹಲ್ಲೆಯಿಂದ ಗಣೇಶ ಅಂಬಿಗನಿಗೆ ಪೆಟ್ಟಾಗಿದ್ದು, ರಕ್ತಶ್ರಾವ ಉಂಟಾಗಿದೆ ಎಂದು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top