Slide
Slide
Slide
previous arrow
next arrow

ನಾಮಧಾರಿ ಸಮಾಜದ ನೂತನ ಅಧ್ಯಕ್ಷರಾಗಿ ನರಸಿಂಹ ನಾಯ್ಕ್ ಆಯ್ಕೆ

300x250 AD

ಯಲ್ಲಾಪುರ : ತಾಲೂಕಾ ಸಮಗ್ರ ನಾಮಧಾರಿ ಸಮಾಜದ ನೂತನ ಅಧ್ಯಕ್ಷರಾಗಿ ಉಮ್ಮಚಗಿಯ ನರಸಿಂಹ ನಾರಾಯಣ ನಾಯ್ಕ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಪಟ್ಟಣದ ಶ್ರೀ ಶಿವಪ್ಪ ಪೂಜಾರಿ ಸಬಾಭವನದಲ್ಲಿ ಶನಿವಾರ ನಡೆದ ನೂತನ ಅಧ್ಯಕ್ಷರ ಆಯ್ಕೆ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡು ಮಾತನಾಡಿದ ನರಸಿಂಹ ನಾಯ್ಕ, ನಾಮಧಾರಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಷ್ಟಗಳಿಗೆ ಸ್ಪಂದಿಸುವುದರ ಜೊತೆ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತೆನೆ. ಸಮಾಜದ ಎಲ್ಲ ಹಿರಿ ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗುತ್ತೇನೆಂದು ಹೇಳಿದರು.

300x250 AD

ಶಿವಪ್ಪ ಪೂಜಾರಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ನಾಮಧಾರಿ ಸಮಾಜದ ಪ್ರಮುಖರಾದ ರವಿ ನಾಯ್ಕ ಎಂಜಿನೀಯರ್, ಹಿಂದಿನ ಅಧ್ಯಕ್ಷ ಸತೀಶ ಎಸ್ ನಾಯ್ಕ, ಪ.ಪಂ ಸದಸ್ಯ ಸೋಮೇಶ್ವರ ನಾಯ್ಕ, ಸಮಾಜದ ಪ್ರಮುಖರಾದ ನವೀನ ನಾಯ್ಕ, ಕಮಲಾಕರ ನಾಯ್ಕ ಗುಳ್ಳಾಪುರ, ರಾಜೇಶ ನಾಯ್ಕ, ಮಂಜುನಾಥ ನಾಯ್ಕ, ಸಂಕೇತ ನಾಯ್ಕ, ಶಿವಾನಂದ ನಾಯ್ಕ ನಂದೊಳ್ಳಿ ಮುಂತಾದವರು ಇದ್ದು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.

Share This
300x250 AD
300x250 AD
300x250 AD
Back to top