Slide
Slide
Slide
previous arrow
next arrow

ಕ್ರಿಯಾಶೀಲ ನ್ಯಾಯವಾದಿ ಪಿ.ಆರ್.ನಾಯ್ಕ್ ನಿಧನ

300x250 AD

ಅಂಕೋಲಾ: ತಾಲೂಕಿನ ಕ್ರಿಯಾಶೀಲ ನ್ಯಾಯವಾದಿ ಪಾಂಡು ರಾಮಾ ನಾಯ್ಕ್ (ಪಿ ಆರ್ ನಾಯ್ಕ್) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮಂಗಳವಾರ ಮುಂಜಾನೆ ನ್ಯಾಯಾಲಯಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಇವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡು ತಾಲೂಕಾಸ್ಪತ್ರೆಗೆ ತರಲಾಗಿತ್ತು. ಅಲ್ಲಿಂದ ಪ್ರಾಥಮಿಕ ಹಂತದ ಚಿಕಿತ್ಸೆ ಪಡೆದು ಕಾರವಾರಕ್ಕೆ ತೆರಳುವ ಸಂದರ್ಭದಲ್ಲಿ ಇವರು ಕೊನೆಯುಸಿರೆಳೆದಿದ್ದಾರೆ.
ವಕೀಲಿ ವೃತ್ತಿಯಲ್ಲಿ ಅತ್ಯಂತ ಕ್ರೀಯಾಶೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿ. ಆರ್. ನಾಯ್ಕ್ ಅಂಕೋಲದ ವಕೀಲರ ಸಂಘದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು.
ಬೇರೆ ಬೇರೆ ನ್ಯಾಯಾಲಯಕ್ಕೆ ತೆರಳಿ ಹಲವು ಜನರಿಗೆ ನ್ಯಾಯ ಕೊಡಿಸಿದ್ದರು. ಎಲ್ಲರೊಂದಿಗೂ ಅವಿನಾಭಾವ ಸಂಬಂಧ ಹೊಂದಿದ್ದರು. ಪಾಂಡು ನಾಯ್ಕ್ ನೇರ ನುಡಿಯ ವ್ಯಕ್ತಿತ್ವ ಹೊಂದಿದ್ದರು. ಕೇವಲ ನ್ಯಾಯವಾದಿ ಮಾತ್ರವಾಗಿರದೆ ಸಮಾಜದ ವಿವಿಧ ಮಜಲುಗಳಲ್ಲಿ ಗುರುತಿಸಿಕೊಂಡಿದ್ದರು.
ಪಾಂಡು ನಾಯ್ಕ್ ರವರಿಗೆ ಹೃದಯಾಘಾತವಾದೊಡನೆ ತಾಲೂಕಿನ ವಕೀಲರು, ಹಿತೈಷಿಗಳು. ಕುಟುಂಬಸ್ತರು ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.ಮೃತರು ಪತ್ನಿ, 2 ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂದು, ಬಳಗವನ್ನು ಅಗಲಿದ್ದಾರೆ.
ಸಂತಾಪ.
ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ,ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ, ನ್ಯಾಯವಾದಿ ಉಮೇಶ ನಾಯ್ಕ್,ಸಂಘದ ಕಾರ್ಯದರ್ಶಿ, ಪಧಾದಿಕಾರಿಗಳು, ಇವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ

300x250 AD
Share This
300x250 AD
300x250 AD
300x250 AD
Back to top