Slide
Slide
Slide
previous arrow
next arrow

ಕಸ್ತೂರಿ ರಂಗನ್ ವರದಿ: ನ.20ಕ್ಕೆ ಜೊಯಿಡಾದಲ್ಲಿ ಸಭೆ

300x250 AD

ಜೊಯಿಡಾ: ಕಸ್ತೂರಿ ರಂಗನ್ ವರದಿ ವಿರೋಧಿ ಜಾಥದ ಮಾಹಿತಿ ಕಾರ್ಯಗಾರವನ್ನು ನವೆಂಬರ್ 20, ಸೋಮವಾರ, ಮುಂಜಾನೆ 10 ಗಂಟೆಗೆ ಜೊಯಿಡಾ ಕುಣಬಿ ಭವನದಲ್ಲಿ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಜಿಲ್ಲಾದ್ಯಂತ ಸೂಕ್ಷ್ಮ ಪ್ರದೇಶಕ್ಕೆ ಒಳಪಡುವ ವ್ಯಾಪ್ತಿಯ, ಸುಮಾರು ಒಂದು ಲಕ್ಷ ಕುಟುಂಬದಿಂದ ಆಕ್ಷೇಪಣಾ ಪತ್ರ ಸಲ್ಲಿಸುವ ಅಭಿಯಾನವನ್ನು ಹೋರಾಟಗಾರರ ವೇದಿಕೆಯು ಪ್ರಾರಂಭಿಸಿದ್ದು, ಮುಂದಿನ ಹೋರಾಟದ ರೂಪುರೇಷೆಯನ್ನು ಚರ್ಚಿಸಲು ಸಭೆ ಕರೆಯಲಾಗಿದ್ದು, ಆಸಕ್ತ ಅರಣ್ಯ ಅತಿಕ್ರಮಣದಾರರು ಆಗಮಿಸಬೇಕಾಗಿ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ಕೋರಿದ್ದಾರೆ.  

300x250 AD

Share This
300x250 AD
300x250 AD
300x250 AD
Back to top