Slide
Slide
Slide
previous arrow
next arrow

ಅಂಕೋಲಾದಲ್ಲಿ ಜಲ ದೀಪಾವಳಿ ಕಾರ್ಯಕ್ರಮ

300x250 AD

ಅಂಕೋಲಾ: ನೈಸರ್ಗಿಕವಾಗಿ ಸಿಗುವ ಶುದ್ಧವಾದ ನೀರನ್ನು ಮಿತವಾಗಿ ಬಳಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಹೇಳಿದರು.

ಅವರು ಬುಧವಾರ ಪುರಸಭೆಯ ವತಿಯಿಂದ ನೀಲಂಪುರದ ವಿಠ್ಠಲಘಾಟ್ ಬಳಿ ನೀರು ಸಂಗ್ರಹಣಾ ಘಟಕದಲ್ಲಿ ಮಹಿಳೆಯರಿಗಾಗಿ ನೀರು ನೀರಿಗಾಗಿ ಮಹಿಳೆಯರು ಎನ್ನುವ ಮಹಿಳೆಯರಿಗಾಗಿ ಏರ್ಪಡಿಸಿದ್ದ ಜಲ ದೀಪಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪುರಸಭೆಯ ನಿಕಟಪೂರ್ವ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಮಾತನಾಡಿ ಮಹಿಳೆಯರು ನೀರನ್ನು ಅವಶ್ಯಕತೆಗೆ ತಕ್ಕಂತೆ ಬಳಸಬೇಕು. ನೀರು ಅನಾವಶ್ಯಕವಾಗಿ ಹರಿದುಹೋಗದಂತೆ ತಡೆಯಬೇಕು. ಮುಂಬರುವ ದಿನಗಳಲ್ಲಿ ಜಲಕ್ಷಾಮ ಕಾಡಲಿದ್ದು, ಮಿತವಾದ ನೀರು ಬಳಕೆಯಿಂದ ಭೂಮಿಯ ಅಂತರ್ಜಲ ಮಟ್ಟ ಏರಿಕೆಯಾಗಿ ಮುಂದಿನ ಪೀಳಿಗೆಗೆ ಶುದ್ಧವಾದ ನೀರು ಸಿಗುತ್ತದೆ ಎಂದರು.
ಸಮುದಾಯ ಸಂಘಟನಾಧಿಕಾರಿ ಡಿ ಎಲ್ ರಾಠೋಡ ಮಾತನಾಡಿ ದೀಪಾವಳಿ ಹಬ್ಬದ ಪ್ರಯುಕ್ತ ಸರಕಾರದ ನಿರ್ದೇಶನದಂತೆ ಜಲ ದೀಪಾವಳಿಯನ್ನು ಎಲ್ಲೆಡೆ ಆಚರಿಸಲಾಗುತ್ತಿದ್ದು ನೀರಿನ ಮಿತ ಬಳಕೆಯ ಕುರಿತು ಅರಿವು ಮೂಡಬೇಕಾಗಿದೆ ಎಂದರು.

300x250 AD

ವಿಠ್ಠಲಘಾಟ ನೀರು ಸಂಗ್ರಹಣಾ ಘಟಕ ಹಾಗೂ ಹೊನ್ನಳ್ಳಿ ನೀರು ಶುದ್ಧೀಕರಣ ಘಟಕಕ್ಕೆ ಪುರಸಭೆಯ ಮಹಿಳಾ ಸಿಬ್ಬಂದಿಗಳನ್ನು ಮತ್ತು‌ ಸದಸ್ಯರನ್ನು ಕರೆದುಕೊಂಡು ಹೋಗಿ ಪ್ರಾತ್ಯಕ್ಷಿಕೆ ತೋರಿಸಿ, ಗಂಗೆಯ ಪೂಜೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಮಂಜುನಾಥ ನಾಯ್ಕ, ತಾರಾ ನಾಯ್ಕ, ಶೀಲಾ ಶೆಟ್ಟಿ, ವ್ಯವಸ್ಥಾಪಕಿ ಸುರೇಖಾ ಪಾರ್ಸೆಕರ, ಕಂದಾಯ ಅಧಿಕಾರಿ ದಿಲೀಪ್ ನಾಯ್ಕ, ಎಂಜಿನಿಯರ್ ಶೆಲ್ಜಾ, ಬೀರಣ್ಣ ನಾಯಕ, ಅಮೃತಾ, ವಿಷ್ಣು ಗೌಡ ಸೇರಿದಂತೆ ಪುರಸಭೆಯ ಸಿಬ್ಬಂದಿಗಳು, ಸ್ತ್ರೀಶಕ್ತಿ, ಸ್ವಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top