Slide
Slide
Slide
previous arrow
next arrow

ನ.10ಕ್ಕೆ ಸೇವಾದಳ ಶತಮಾನೋತ್ಸವ ಸಂಭ್ರಮ

300x250 AD

ಯಲ್ಲಾಪುರ: ಕಾಂಗ್ರೆಸ್ ಸೇವಾದಳಕ್ಕೆ ನೂರು ವರ್ಷ ತುಂಬಿದ ಪ್ರಯುಕ್ತ ಬೆಂಗಳೂರಿನ ಅರಮನೆ ಮೈದಾನದಲ್ಲಿ ನ.10 ರಂದು ಶತಮಾನೋತ್ಸವ ಸಂಭ್ರಮ ನಡೆಯಲಿದೆ ಎಂದು ಭಾರತ ಸೇವಾದಳದ ಜಿಲ್ಲಾ ಅಧ್ಯಕ್ಷ ಪ್ರಶಾಂತ ಸಭಾಹಿತ ಹೇಳಿದರು.

ಅವರು ಬುಧವಾರ ಈ ಕುರಿತು ಮಾಹಿತಿ ನೀಡಿ, ಜಿಲ್ಲೆಯಿಂದ 200 ಸೇವಾದಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸೇವಾದಳ ಕಾಂಗ್ರೆಸ್ ನ ಶಕ್ತಿಯುತ ಘಟಕವಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಹಂತದಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಿದ್ದು, ಸಂಘಟನೆ ಸಕ್ರಿಯವಾಗಿದೆ ಎಂದರು.

ಜಿಲ್ಲಾ ಕಾಂಗ್ರಸ್ ಉಪಾಧ್ಯಕ್ಷ ಆರ್.ಎಚ್. ನಾಯ್ಕ ಮಾತನಾಡಿ,
ಸೇವಾದಳ ಸ್ಥಳೀಯವಾಗಿ ಸಂಘಟನೆ ಬಲಗೊಳಿಸಲಾಗುತ್ತಿದೆ. ಜಿಲ್ಲೆಯಿಂದಲೂ ಸಾಕಷ್ಟು ಕಾರ್ಯಕರ್ತರು ಹೋಗಿ ಶತಮಾನೋತ್ಸವ ಸಂಭ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

300x250 AD

ಸೇವಾದಳದ ಪ್ರಮುಖರಾದ ಆಯಿಷಾ ಗಜನೂರು,ಅಕ್ಷಯ ರೇವಣಕರ್,ಮಹೇಶ ನಾಯ್ಕ,ಪರ್ಜಾನ ಶೇಖ್ ಇದ್ದರು.

Share This
300x250 AD
300x250 AD
300x250 AD
Back to top