Slide
Slide
Slide
previous arrow
next arrow

ನ.7ರವರೆಗೂ ಆಹಾರ ಧಾನ್ಯ ಪೂರೈಸಲ್ಲ: ಪಡಿತರ ವಿತರಕರ ನಿರ್ಧಾರ

300x250 AD

ಹಳಿಯಾಳ: ನ್ಯಾಯಬೆಲೆ ಅಂಗಡಿ ಮಾಲೀಕರ ಬೇಡಿಕೆಗಳನ್ನ ಈಡೇರಿಸುವವರೆಗೆ ಆಹಾರ ಧಾನ್ಯಗಳನ್ನ ಪೂರೈಸದಿರಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸರಕಾರಿ ಪಡಿತರ ವಿತರಕರ ಸಂಘಟನೆ ಘೋಷಿಸಿದೆ.

ಈ ಕುರಿತು ತಹಶೀಲ್ದಾರರಿಗೆ ಮನವಿ ಸಲ್ಲಿಸಿರುವ ವಿತರಕರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.7ರಂದು ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗಿದೆ. ಅಂದು ಸಂಘದ ರಾಜ್ಯಾಧ್ಯಕ್ಷರು ನಿರ್ದೇಶನ ನೀಡುವವರೆಗೂ ನಾವು ಗ್ರಾಹಕರಿಗೆ ಆಹಾರ ಧಾನ್ಯ ಪೂರೈಸುವುದಿಲ್ಲ ಎಂದು ತಿಳಿಸಿದ್ದಾರೆ.

300x250 AD

ಈ ವೇಳೆ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ತಾಲೂಕು ಅಧ್ಯಕ್ಷ ಶಂಭಾಜಿ ಹಳಿಯಾಳಕರ, ಉಪಾಧ್ಯಕ್ಷ ಪರಶುರಾಮ ಗೌಡ, ತಾಲೂಕು ಕಾರ್ಯದರ್ಶಿ ನವೀನ್ ಪಾಟೀಲ್, ತಾಲೂಕು ಖಜಾಂಚಿ ಬಸವರಾಜ ಪಾಟೀಲ್ ಮುಂತಾದವರಿದ್ದರು.

Share This
300x250 AD
300x250 AD
300x250 AD
Back to top