Slide
Slide
Slide
previous arrow
next arrow

ಅಬಾಕಸ್‌ ಸ್ಪರ್ಧೆ: ಮನಸ್ವಿನೀ ವಿದ್ಯಾನಿಲಯದ ಮಕ್ಕಳ ಸಾಧನೆ

300x250 AD

ಯಲ್ಲಾಪುರ: ಚಿತ್ರದುರ್ಗದಲ್ಲಿ ನಡೆದ 5ನೇ ಅಂತರ್ ಜಿಲ್ಲಾ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ತಾಲೂಕಿನ ಉಮ್ಮಚಗಿಯ ಮನಸ್ವಿನೀ ವಿದ್ಯಾನಿಲಯದ ಮಕ್ಕಳು ಉತ್ತಮ ಸಾಧನೆಯನ್ನು ಮೆರೆದಿದ್ದಾರೆ.

ಒಟ್ಟು 6 ಜನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪಿಯುಷಾ ಆರ್.ಪಾಯದೇ ಹಾಗೂ ರಿಶವ್ ಆರ್.ಪರಮಾನಂದ ಪ್ರಥಮ ಸ್ಥಾನ, ರೇಯಾಂಶ ಮೊಗೇರ ತೃತೀಯ ಸ್ಥಾನ, ಧನ್ಯಶ್ರೀ ಕೆ.ಬರಾದೂರ್, ಎಂ.ರಿತೀಶಾ, ಸಮೃದ್ಧಿ ಜಿ.ಹೆಗಡೆ ನಾಲ್ಕನೇ ಸ್ಥಾನ ಪಡೆದಿದ್ದಾರೆ.

300x250 AD

ರಿಶವ ಆರ್.ಪರಮಾನಂದ 100ಕ್ಕೆ 97 ಅಂಕ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ. ಮಕ್ಕಳ ಈ ಸಾಧನೆಗೆ ಮನಸ್ವಿನೀ ವಿದ್ಯಾನಿಲಯದ ಅಧ್ಯಕ್ಷೆ ರೇಖಾ ಭಟ್ ಕೋಟೆಮನೆ, ಆಡಳಿತ ಮಂಡಳಿ ಹಾಗೂ ಶಿಕ್ಷಕರು ಹಾಗೂ ಪಾಲಕರು ತುಂಬುಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Share This
300x250 AD
300x250 AD
300x250 AD
Back to top