Slide
Slide
Slide
previous arrow
next arrow

ಅರ್ಚನಾ ಮೇಸ್ತಗೆ ಕುವೆಂಪು ವಿವಿಯಿಂದ ಡಾಕ್ಟರೇಟ್

300x250 AD

ಹೊನ್ನಾವರ: ತಾಲೂಕಿನ ಕರ್ಕಿಯ ಅರ್ಚನಾ ಮೇಸ್ತ ಅವರಿಗೆ ಶಿವಮೊಗ್ಗಾ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರೇಟ್ ಆಫ್ ಫಿಲೋಸೋಫಿ (ಪಿಎಚ್‌ಡಿ) ಪದವಿಯನ್ನು ಪ್ರದಾನ ಮಾಡಿದೆ.

ಇವರು ಸಸ್ಯ ಶಾಸ್ತ್ರ ವಿಭಾಗದ ‘ಬಯೋಪ್ರಾಸ್ಪೆಕ್ಟಿಂಗ್ ಆಪ್ ಉಸ್ನೆಯಾ ಸ್ಪೆಸಿಸ್ ಇನ್ ಸೆಂಟ್ರಲ್ ವೆಸ್ಟರ್ನ್ ಘಾಟ್ಸ್ ಆಪ್ ಸದರ್ನ್ ಇಂಡಿಯಾ’ ಎಂಬ ಮಹಾಪ್ರಬಂಧಕ್ಕೆ 2023-24ನೇ ಸಾಲಿನ ಪಿಎಚ್‌ಡಿ ಪದವಿಯನ್ನು ಪ್ರದಾನ ಮಾಡಿದೆ. ಇವರಿಗೆ ಡಾ.ರಾಜೇಶ್ವರಿಯವರು ಮಾರ್ಗದರ್ಶನ ನೀಡಿದ್ದರು. ಈಕೆ ಕರ್ಕಿಯ ನಿವೃತ್ತ ಕೆ.ಪಿ.ಸಿ ಆಫೀಸರ್ ರಾಮಚಂದ್ರ ಎಂ.ಮೇಸ್ತ ಹಾಗೂ ಶೋಭಾ ಇವರ ಪುತ್ರಿಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top