Slide
Slide
Slide
previous arrow
next arrow

ಧರ್ಮಾ ಜಲಾಶಯದಿಂದ ಹಾನಗಲ್‌ಗೆ ನೀರು ಬಿಡದಂತೆ ರೈತರ ಒತ್ತಾಯ

300x250 AD

ಮುಂಡಗೋಡ: ತಾಲೂಕಿನ ಧರ್ಮಾ ಜಲಾಶಯದ ಸುತ್ತಮುತ್ತಲಿನ ರೈತರಿಗೆ ಮತ್ತು ಧರ್ಮಾ ಕಾಲೋನಿಗೆ ನೀರಿಲ್ಲದಿರುವಾಗ ದೊಡ್ಡ ಕಾಲುವೆ ನೀರು ಹಾನಗಲ್ ತಾಲೂಕಿಗೆ ಬಿಡುವುದು ಸರಿಯಲ್ಲ ಎಂದು ತಾಲೂಕಿನ ಮಳಗಿ ರೈತರು ತಹಶೀಲ್ದಾರ ಶಂಕರ ಗೌಡಿ ಅವರಿಗೆಗೆ ಮನವಿ ನೀಡಿದ್ದಾರೆ.

ಧರ್ಮಾ ಕಾಲೋನಿಯ ಗ್ರಾಮಸ್ಥರು ಮತ್ತು ಅಲ್ಲಿಯ ಸುತ್ತ ಮುತ್ತಲಿನ ರೈತರು ಸೇರಿ ಈ ವರ್ಷ ಬರಗಾಲ ಪೀಡಿತವಾಗಿರುವುದರಿಂದ ಹಾನಗಲ್ ತಹಶೀಲ್ದಾರಗೆ ಮನವಿ ನೀಡಲು ಹೋಗಿದ್ದ ಸಂದರ್ಭದಲ್ಲಿ ಅಲ್ಲಿಯ ತಹಶೀಲ್ದಾರ ಅವರು ನಮ್ಮ ತಾಲೂಕಿನ ರೈತರಿಗೆ ಧರ್ಮಾಜಲಾಶಯದ ನೀರು ಬಿಡಬೇಕು ಎಂದು ಅಲ್ಲಿಯ ರೈತರ ಮಾತು ಕೇಳಿ ಹೇಳುತ್ತಾರೆ. ಆದರೆ ತಾಲೂಕಿನ ಧರ್ಮಾ ಜಲಾಶಯ ರೈತರ ಹಾಗೂ ಗ್ರಾಮಸ್ಥರ ಸಮಸ್ಯೆ ಕೇಳಲು ಸಾಧ್ಯವೆ ಇಲ್ಲ. ನಿಮ್ಮ ಸಮಸ್ಯೆ ನಿಮ್ಮ ತಾಲೂಕಿನ ತಹಶೀಲ್ದಾರ ಮತ್ತು ನಿಮ್ಮ ಶಾಸಕರೆ ಸರಿ ಮಾಡುತ್ತಾರೆ ಎಂದು ಹೇಳಿ ಕಳುಹಿಸಿದ್ದಾರೆ ಎಂದು ಅಲ್ಲಿಯ ರೈತರು ಇಲ್ಲಿಯ ತಶೀಲ್ದಾರಗೆ ಮನವಿ ನೀಡಲು ಬಂದಿರುವ ಸಂದರ್ಭದಲ್ಲಿ ಹೇಳಿದರು.

300x250 AD

ಈ ಸಂದರ್ಭದಲ್ಲಿ ವಿನಾಯಕ ನಾಯ್ಕ, ರಾಜೇಂದ್ರ ನಾಯ್ಕ, ಚಂದ್ರಶೇಖರ ಹರಿಜನ, ನಾಗರಾಜ ಹಸ್ಲರ್, ಮಂಜುನಾಥ ಹಸ್ಲರ್, ಆನಂದ ನಾಯ್ಕ ಹಾಗೂ ಫಕ್ಕೀರಪ್ಪ ಕಮ್ಮಾರ ಮುಂತಾದವರಿದ್ದರು.

Share This
300x250 AD
300x250 AD
300x250 AD
Back to top