Slide
Slide
Slide
previous arrow
next arrow

ಅ.11ಕ್ಕೆ ವಿಚಾರ-ಸಂವಾದ ಕಾರ್ಯಕ್ರಮ

300x250 AD

ಶಿರಸಿ: ಸಿದ್ದಾಪುರ ತಾಲೂಕಿನ ಧರ್ಮಶ್ರೀ ಫೌಂಡೇಶನ್ ವತಿಯಿಂದ ಆರ್.ಟಿ.ಹೆಗಡೆ ಹೂವಿನಮನೆ ಇವರ ಸ್ಮರಣಾರ್ಥ ದೀನದಯಾಳಯ ಟ್ರಸ್ಟ್ ಶಿರಸಿ ಇವರ ಆಶ್ರಯದೊಂದಿಗೆ ಅ.11ರಂದು ಬುಧವಾರ ಮಧ್ಯಾಹ್ನ 3-00 ಗಂಟೆಗೆ ಸಿದ್ದಾಪುರದ ರಾಘವೇಂದ್ರ ಮಠದಲ್ಲಿ “ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ” ಎಂಬ ವಿಚಾರ-ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸಭಾ ಕಾರ್ಯಕ್ರಮವನ್ನು ಕರ್ನಾಟಕ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಕುರಿತು ಧಾರವಾಡ ಹೈಕೋರ್ಟಿನ ನ್ಯಾಯವಾದಿ ಅನೂಪ ದೇಶಪಾಂಡೆ ಉಪನ್ಯಾಸ ನೀಡಲಿದ್ದಾರೆ. ಧರ್ಮಶ್ರೀ ಫೌಂಡೇಶನ್‌ನ ಕಾರ್ಯಾಧ್ಯಕ್ಷ ಡಾ. ರವಿ ಆರ್. ಹೆಗಡೆ ಹೂವಿನಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. 

300x250 AD

ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು ಆಗಮಿಸಬೇಕೆಂದು ಬೆಂಗಳೂರು ಚಾರ್ಟಡ್ ಅಕೌಂಟೆಂಟ್‌ನ ಅಧ್ಯಕ್ಷ ರಾಮಮೋಹನ ಆರ್. ಹೆಗಡೆ ಹಾಗೂ ಧರ್ಮಶ್ರೀ ಫೌಂಡೇಶನ್‌ನ ಕಾರ್ಯದರ್ಶಿ ಶ್ಯಾಮಲಾ ರವಿ ಹೆಗಡೆ ಹೂವಿನ ಮನೆ ವಿನಂತಿಸಿದ್ದಾರೆ.

Share This
300x250 AD
300x250 AD
300x250 AD
Back to top