Slide
Slide
Slide
previous arrow
next arrow

ಕಾರವಾರ ; ಹೆದ್ದಾರಿ ಸುರಂಗ ಮಾರ್ಗಗಳಲ್ಲಿ ಸಂಚಾರ ಆರಂಭ

300x250 AD

ಕಾರವಾರ: ಕಳೆದಮೂರು ತಿಂಗಳಿಂದ ಸಂಚಾರ ನಿಷೇಧಕ್ಕೆ ಒಳಪಟ್ಟು ವಿವಾದದಲ್ಲಿ ಸಿಲುಕಿದ್ದ ರಾಷ್ಟ್ರೀಯ ಹೆದ್ದಾರಿ 66ರ ಕಾರವಾರದ ಎರಡು ಸುರಂಗದಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೋಮವಾರ ಆದೇಶ ಮಾಡಿದ್ದಾರೆ.

”ಈ ಅನುಮತಿಗೂ ಷರತ್ತು ವಿಧಿಸಲಾಗಿದೆ. ಜಿಲ್ಲಾಡಳಿತ ನಿಯೋಜಿಸುವ ತಾಂತ್ರಿಕ ಅಧಿಕಾರಿಗಳ ಸಮ್ಮುಖದಲ್ಲಿ ಅ.8ರೊಳಗೆ ಮತ್ತೊಮ್ಮೆ ಸುರಂಗದ ತಪಾಸಣೆ ನಡೆಸದೇ ಇದ್ದಲ್ಲಿ ಈ ಆದೇಶವನ್ನು ಹಿಂಪಡೆಯುವುದಾಗಿ ತಿಳಿಸಲಾಗಿದೆ. ಅಲ್ಲದೆ, ಈ ಅವಧಿಯಲ್ಲಿ ಸುರಂಗದಲ್ಲಿ ಉಂಟಾಗುವ ಅನಾಹುತಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರೇ ಜವಾಬ್ದಾರರು.” ಎಂದು ಕರಾರು ಹಾಕಲಾಗಿದೆ.

ಸುರಂಗದ ಸುರಕ್ಷತೆ ಬಗ್ಗೆ ಪುಣಾದ ಎಂಜಿನಿಯರಿಂಗ್‌ ಕಾಲೇಜಿನ ತಜ್ಞರು ಕೊಟ್ಟಿರುವ ವರದಿಯನ್ನು ಜಿಲ್ಲಾಡಳಿತ ತಿರಸ್ಕರಿಸಿದೆ. ತಾಂತ್ರಿಕ ಅಧಿಕಾರಿಗಳ ಸಮ್ಮುಖದಲ್ಲಿ ಅ.2ರಂದು ತಪಾಸಣೆ ನಡೆಸುವಂತೆ ಜಿಲ್ಲಾಡಳಿತವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ತಿಳಿಸಿತ್ತು. ಕಾರ್ಯದೊತ್ತಡದಿಂದ ತಜ್ಞರು ಬರಲು ಸಾಧ್ಯವಾಗಿಲ್ಲ, ಅ.8ರಂದು ತಪಾಸಣೆಯನ್ನು ನಿಗದಿ ಮಾಡುವಂತೆ ಎನ್‌ಎಚ್‌ಐ ಕೋರಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಅಲ್ಲದೆ, ಅ.8ರೊಳಗೆ ಸುರಂಗದ ಜಂಟಿ ತಪಾಸಣೆ ಕೈಗೊಳ್ಳುವ ಜವಾಬ್ದಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರದ್ದು. ಇದಕ್ಕೆ ಸಂಬಂಧಿಸಿದಂತೆ ಮತ್ತೆ ಪತ್ರ ವ್ಯವಹಾರ ನಡೆಸುವುದಿಲ್ಲ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಅವರು ಆದೇಶದಲ್ಲಿತಿಳಿಸಿದ್ದಾರೆ.

300x250 AD

ಬ್ಯಾರಿಕೇಟ್‌ ತೆರವು ಸಂಚಾರ ಮುಕ್ತ

ಸುರಂಗಕ್ಕೆ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಐಆರ್‌ಬಿ ಅಧಿಕಾರಿಗಳು ಮಧ್ಯಾಹ್ನವೇ ತೆರವು ಮಾಡಿದರು. ದ್ವಿಚಕ್ರ ವಾಹನ, ಕಾರುಗಳು ಸೇರಿ ಲಘು ವಾಹನಗಳು ಮಾತ್ರ ಸಂಚರಿಸಲು ಅವಕಾಶ ಮಾಡಿಕೊಟ್ಟರು. ಸುರಂಗದಲ್ಲಿವಾಹನ ಸಂಚಾರಕ್ಕೆ ಅವಕಾಶ ನೀಡಿ ಜಿಲ್ಲಾಧಿಕಾರಿ ಸಂಜೆ ಆದೇಶ ಮಾಡಿದರು. ಬಳಿಕ ಸುರಂಗದಲ್ಲಿಎಲ್ಲವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಸುರಂಗದಲ್ಲಿಸಂಚಾರ ನಿಷೇಧ ತೆರವು ಮಾಡುವಂತೆ 10 ತಾಸಿಗೂ ಅಧಿಕ ಸಮಯ ಪ್ರತಿಭಟನೆ ಮಾಡಿದ್ದ ವಿಧಾನ ಪರಿಷತ್‌ ಸದಸ್ಯ ಗಣಪತಿ ಉಳ್ವೇಕರ ಅವರು ಸಂಜೆ ಸುರಂಗ ಸ್ಥಳಕ್ಕೆ ಭೇಟಿ ನೀಡಿ ವಾಹನ ಸಂಚಾರ ಖಚಿತಪಡಿಸಿಕೊಂಡರು.

Share This
300x250 AD
300x250 AD
300x250 AD
Back to top