Slide
Slide
Slide
previous arrow
next arrow

ಎಂಡೋಸಲ್ಫಾನ್ ಪೀಡಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ ಸ್ಕೋಡ್‌ವೆಸ್

300x250 AD

ಕಾರವಾರ: ಜಿಲ್ಲೆಯ 6 ತಾಲೂಕುಗಳಾದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಶಿರಸಿ ಹಾಗೂ ಸಿದ್ದಾಪುರ ವ್ಯಾಪ್ತಿಯಲ್ಲಿ ಸರಕಾರ ಗುರುತಿಸಿದ ಎಂಡೋಸಲ್ಫಾನ್ ಪೀಡಿತ ಪ್ರದೇಶಗಳಲ್ಲಿ ಮೇ 2018ರಿಂದ ಏಪ್ರಿಲ್ 2019ರವರೆಗೆ ಶಿರಸಿಯ ಸ್ಕೋಡ್‌ವೆಸ್ ಸಂಸ್ಥೆ ಸಮೀಕ್ಷೆ ನಡೆಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರಿಗೆ ವರದಿಯನ್ನು ಸಲ್ಲಿಸಿದೆ.

ಕೃಷಿ, ತೋಟಗಾರಿಕೆ ಉತ್ಪನ್ನಗಳನ್ನು ಹೆಚ್ಚಿಸುವ ಉದ್ದೇಶದಿಂದ ಜರ್ಮನಿಯಲ್ಲಿ ಬಳಕೆಯಾಗುತ್ತಿದ್ದ ಎಂಡೋಸಲ್ಫಾನ್ ಎಂಬ ಕ್ರಿಮಿನಾಶಕವನ್ನು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗೇರು ಬೀಜ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಸರಕಾರವೇ ಗೇರು ನೆಡುತೋಪುಗಳಿಗೆ ಹೆಲಿಕಾಪ್ಟರ್ ಮೂಲಕ ಸಿಂಪಡಣೆ ಮಾಡಿತ್ತು. 1980ರಿಂದ 2000ರ ಅವಧಿಯಲ್ಲಿ ಗೇರು ಅಭಿವೃದ್ದಿ ನಿಗಮದಿಂದ ದಕ್ಷಿಣಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಯ ಗೇರು ನೆಡುತೋಪುಗಳ ಮೇಲೆ ಹೆಲಿಕಾಪ್ಟರ್ ಮೂಲಕ ಹಾಗೂ ಮಾನವ ಶಕ್ತಿಯನ್ನು ಬಳಸಿ ಎಂಡೋಸಲ್ಫಾನ್ ಸಿಂಪಡಣೆ ಮಾಡಿದ್ದ ಪರಿಣಾಮ ಸಾವಿರಾರು ಜನ ವಿವಿಧ ರೀತಿಯ ಬಹುವಿಧ ಅಂಗವೈಕಲ್ಯತೆ, ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅಂಶ ಬೆಳಕಿಗೆ ಬರುತ್ತಿದ್ದಂತೆ ಹೈಕೋರ್ಟ್ ಆದೇಶದ ಮೇರೆಗೆ 2011ರಲ್ಲಿ ಸರಕಾರ ಕರ್ನಾಟಕದಲ್ಲಿ ಎಂಡೋಸಲ್ಫಾನ್ ಕ್ರಿಮಿನಾಶಕ ಬಳಕೆಯನ್ನು ನಿಷೇಧಿಸಿತ್ತು.

ಕರ್ನಾಟಕಲ್ಲಿ ಎಂಡೋಸಲ್ಫಾನ್ ಬಾಧಿತರು: ಹೈಕೋರ್ಟ್ ಸೂಚನೆಯಂತೆ ರಾಜ್ಯ ಕರಾವಳಿಯ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 2014ರ ಹೊತ್ತಿಗೆ ಸರಕಾರ ನಡೆಸಿದ ಸಮೀಕ್ಷೆಯಿಂದ ದಕ್ಷಿಣಕನ್ನಡದಲ್ಲಿ 4139, ಉಡುಪಿ 1553, ಉತ್ತರಕನ್ನಡ 1741 ಜನರನ್ನು ಎಂಡೋಸಲ್ಫಾನ್ ಬಾಧಿತರೆಂದು ಗುರುತಿಸಲಾಗಿದ್ದು, ಈವರೆಗೂ ಎಂಡೋಸಲ್ಫಾನ್ ಬಾಧಿತರ ಸಮಗ್ರ ಅಭಿವೃದ್ಧಿಯ ಕುರಿತು ಸರಿಯಾದ ಪೂರ್ಣ ಪ್ರಮಾಣದ ಯೋಜನೆಗಳಾಗಲೀ ಅಥವಾ ಕಾರ್ಯಕ್ರಮಗಳಾಗಲಿ ಜಾರಿಯಾಗಿರಲಿಲ್ಲ. ಈ ಕಾರಣ ಎಂಡೋಸಲ್ಫಾನ್ ಬಾಧಿತರ ಕುರಿತು ಧ್ವನಿ ಎತ್ತುವ, ಸರಕಾರವನ್ನು ಒತ್ತಾಯಿಸುವ ಉದ್ದೇಶದಿಂದ ಸ್ಕೊಡ್‌ವೆಸ್ ಸಂಸ್ಥೆ ಜಿಲ್ಲೆಯ 6 ತಾಲೂಕುಗಳ ವ್ಯಾಪ್ತಿಯಲ್ಲಿ ಅಧ್ಯಯನ ಕೈಗೊಂಡು ವರದಿ ಸಿದ್ಧಪಡಿಸಿದೆ.

ಸಮೀಕ್ಷೆಯಿಂದ ಕಂಡುಬAದ ಅಂಶಗಳು: ಸಮೀಕ್ಷೆಯಲ್ಲಿ ಒಟ್ಟು 1690 ಮಂದಿ ಲಭ್ಯವಾಗಿದ್ದು, ಬಾಧಿತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಾಗಿದ್ದಾರೆ. ಬಾಧಿತರಲ್ಲಿ ಮಾನಸಿಕ ಹಾಗೂ ಮೆದುಳಿಗೆ ಸಂಬಂಧಿಸಿದ ಕಾಯಿಲೆ, ನಿರ್ನಾಳ ಗ್ರಂಥಿಗೆ ಸಂಬಂಧಿಸಿದ ಕಾಯಿಲೆಗಳು, ಮಕ್ಕಳ ಹೃದಯ ಸಂಬAಧಿ ಕಾಯಿಲೆಗಳು, ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು, ಮೂಳೆ ಸಂಬAಧಿ ಕಾಯಿಲೆಗಳು, ನರರೋಗ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಸಂಬಂಧಿಸಿದ ಕಾಯಿಲೆಗಳು, ಕಿವಿ, ಮೂಗು, ಗಂಟಲಿಗೆ ಸಂಬಂಧಿಸಿದ ಕಾಯಿಲೆಗಳು ಸೇರಿದಂತೆ ಬಹು ವಿಧದ ಕಾಯಿಲೆಗಳಿಂದ ಬಳಲುತ್ತಿರುವುದು ಕಂಡುಬಂದಿದೆ. ಅಲ್ಲದೇ ಎಂಡೋ ಬಾಧಿತರಲ್ಲಿ ಸಂಘಟನಾತ್ಮಕವಾಗಿ ಒಂದಾಗಿ ಸೌಲಭ್ಯ ಪಡೆಯುವ ಯಾವುದೇ ಸಂಘಟನೆ ಇಲ್ಲದಿರುವುದು ಬಾಧಿಕರಿಗೆ ಸೌಲಭ್ಯ ಮರೀಚಿಕೆಯಾಗಲು ಕಾರಣವಾಗಿದೆ.

300x250 AD

2014ರ ನಂತರ ಎಂಡೋಸಲ್ಪಾನ ಬಾಧಿತರ ಸ್ಥಿತಿಗತಿಗಳ ಕುರಿತು ಸಮೀಕ್ಷೆ ನಡೆದಿದ್ದಾಗಲೀ ಅಥವಾ ಹೊಸ ಸೇರ್ಪಡೆ ಆಗಿದ್ದಾಗಲೀ ಆಗಿಲ್ಲ. ಎಂಡೋಸಲ್ಫಾನ್ ಬಾಧಿತರಲ್ಲದೇ ಕುಟುಂಬದ ಹೆಚ್ಚಿನ ಸದಸ್ಯರಲ್ಲಿ ಮನೋದೈಹಿಕ ಕಾಯಿಲೆಗಳು ಹೆಚ್ಚಾಗಿರುವುದು ಕಂಡುಬಂದಿದ್ದು, ಕುಟುಂಬ ಆದಾಯದ ಶೇ.65ರಷ್ಟು ಹಣವನ್ನು ವೈದ್ಯಕೀಯ ಸೇವೆ ಪಡೆಯಲು ಖರ್ಚು ಮಾಡುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಅಲ್ಲದೇ, ಎಂಡೋ ಬಾಧಿತ ಮಗುವಿನ ಹೊರತಾಗಿ ಉಳಿದ ಮಕ್ಕಳು ಹಾಗೂ ಕುಟುಂಬದವರೂ ಸಹ ಕೌಟುಂಬಿಕ, ಸಾಮಾಜಿಕ, ಸಾಂಸ್ಕೃತಿಕ ಸೌಲಭ್ಯಗಳಿಂದ ವಂಚಿತರಾಗಿರುವುದು, ಬಾಧಿತರ ಕುಟುಂಬದಲ್ಲಿ ವೈಯಕ್ತಿಯ ಶುಚಿತ್ವದ ಕೊರತೆಯಿರುವುದು ಕೂಡ ಸಮೀಕ್ಷೆಯ ವೇಳೆ ಕಂಡುಬಂದಿದೆ.

ಸಮೀಕ್ಷಾ ವರದಿಯೊಂದಿಗೆ ಶಿಫಾರಸು: ಶೇ.60ಕ್ಕಿಂತ ಹೆಚ್ಚು ಬಾಧೆಗೊಳಪಟ್ಟ ವ್ಯಕ್ತಿಗಳಿಗೆ 24*7 ಮಾದರಿಯ ನಿಗಾಕೇಂದ್ರ ನಿರ್ಮಿಸುವುದು, ಮುಂಜಾಗೃತೆ, ಸಮಾಲೋಚನೆ ಹಾಗೂ ಅಗತ್ಯ ಎಚ್ಚರಿಕೆ ವಹಿಸುವ ಬಗ್ಗೆ ಅರಿವು ಮೂಡಿಸುವುದು. ನ್ಯಾಯಾಲಯದ ಮದ್ಯಂತರಆದೇಶವನ್ನ ಆಧರಿಸಿ ಮಾಶಾಸನದ ಪ್ರಮಾಣವನ್ನು ಹೆಚ್ಚಿಸುವುದು. ಎಂಡೋಬಾಧಿತರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ತಾಲೂಕಾ ಮಟ್ಟದಲ್ಲಿ ಕುಂದುಕೊರತೆ ನಿವಾರಣಾ ಸಮಿತಿಯನ್ನು ರಚಿಸಿ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸುವುದು ಸೇರಿದಂತೆ ಅನೇಕ ಶಿಫಾರಸುಗಳನ್ನು ಕೂಡ ಸ್ಕೋಡ್‌ವೆಸ್ ನೀಡಿರುವುದಾಗಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ್ ನಾಯ್ಕ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top