Slide
Slide
Slide
previous arrow
next arrow

ಅ.2ಕ್ಕೆ ವಿಂಶತಿ ಗಾನ ಸಂಭ್ರಮ, ಗುರುವಂದನಾ ಕಾರ್ಯಕ್ರಮ

300x250 AD

ಬೆಂಗಳೂರು: ಹಿಂದೂಸ್ತಾನಿ ಸಂಗೀತದ ಅಧ್ಯಯನ ಹಾಗೂ ಅಧ್ಯಾಪನದಲ್ಲಿ 20 ವರ್ಷಗಳಿಂದ ಕಾರ್ಯನಿರತರಾಗಿರುವ ಬೆಂಗಳೂರಿನ ಸ್ವರ ಗಾಂಧಾರ ಸಂಗೀತ ವಿದ್ಯಾಲಯದ ವತಿಯಿಂದ ಅ.2, ಸೋಮವಾರದಂದು ಬೆಂಗಳೂರಿನ ಮಲ್ಲೇಶ್ವರಂನ ಅಖಿಲ ಭಾರತ ಹವ್ಯಕ ಮಹಾಸಭಾದ ಆವರಣದಲ್ಲಿ ವಿಂಶತಿ ಗಾನ ಸಂಭ್ರಮ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಬೆಳಿಗ್ಗೆ 9-00 ಗಂಟೆಗೆ ದೀಪ ಪ್ರಜ್ವಲನ, ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ ಪ್ರಸ್ತುತಿ ನಡೆಯಲಿದೆ. ಪ್ರಕಾಶ ದೇಶಪಾಂಡೆ ಹಾಗೂ ನಾಗರಾಜ ಹೆಗಡೆ ಹಾಗೂ ಮಂಜುನಾಥ ಭಟ್ಟ ತಬಲಾ ಸಾಥ್, ಸಂವಾದಿನಿಯಲ್ಲಿ ಪ್ರತಿಭಾ ಹೆಗಡೆ ಸಾಥ್ ನೀಡಲಿದ್ದಾರೆ.

ಸಾಯಂಕಾಲ 5-00 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಅಹಲ್ಯಾ ಶರ್ಮಾ ಉಪಸ್ಥಿತರಿರಲಿದ್ದು, ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಡಾ. ಮಲ್ಲೆಪುರಂ ಜಿ. ವೆಂಕಟೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ‌. 

300x250 AD

ಸಾಯಂಕಾಲ ಪುನಃ 6 ಗಂಟೆಯಿಂದ ಜರುಗುವ ಗಾನ ಸಂಭ್ರಮದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕಿ ವಿದುಷಿ ಪೂರ್ಣಿಮಾ ಭಟ್ಟ ಕುಲಕರ್ಣಿ ಇವರಿಂದ ಗಾಯನ ನಡೆಯಲಿದ್ದು, ತಬಲಾದಲ್ಲಿ ಪಂಡಿತ ಗುರುಮೂರ್ತಿ ವೈದ್ಯ,ಸಂವಾದಿನಿಯಲ್ಲಿ ಸೂರ್ಯ ಉಪಾಧ್ಯಾಯ ಸಹಕರಿಸಲಿದ್ದಾರೆ. 

ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಆಗಮಿಸಿ, ಗಾನ ಸಂಭ್ರಮವನ್ನು ಚಂದಗಾಣಿಸುವಂತೆ ಸ್ವರ ಗಾಂಧಾರ ಸಂಗೀತ ವಿದ್ಯಾಲಯದ ಅಧ್ಯಕ್ಷೆ ಪ್ರತಿಭಾ ಜಗದೀಶ ಹೆಗಡೆ ವಿನಂತಿಸಿದ್ದಾರೆ.

Share This
300x250 AD
300x250 AD
300x250 AD
Back to top