Slide
Slide
Slide
previous arrow
next arrow

ರವೀಂದ್ರನಾಥ ಠಾಗೋರರ ಮೂರ್ತಿಗೆ ಹಾನಿ: ಶೀಘ್ರ ದುರಸ್ತಿಗೆ ಆಗ್ರಹ

300x250 AD

ಕಾರವಾರ: ರವೀಂದ್ರನಾಥ ಠಾಗೋರ್‌ ಕಡಲ ತೀರದಲ್ಲಿರುವ ಠಾಗೋರ್‌ ಅವರ ಮೂರ್ತಿಯ ಬಲಗಣ್ಣು ಕಳಚಿ ಹೋಗಿದ್ದು, ನಗರಸಭೆ ತಕ್ಷಣ ಸರಿಪಡಿಸಬೇಕಿದೆ ಎಂಬುದು ಪ್ರವಾಸಿಗರ ಆಗ್ರಹವಾಗಿದೆ.

ಕವಿ, ನೋಬೆಲ್‌ ಪ್ರಶಸ್ತಿ ವಿಜೇತ ರವೀಂದ್ರನಾಥ್‌ ಠಾಗೋರರ ಮೂರ್ತಿ ಕಾರವಾರ ಬೀಚ್‌ನಲ್ಲಿ ವರ್ಷದ ಹಿಂದೆ ಮರು ಸ್ಥಾಪನೆ ಮಾಡಲಾಗಿತ್ತು. ಮಹಾರಾಷ್ಟ್ರದ ಕಲಾವಿದರಿಂದ ಈ ಮೂರ್ತಿ ರೂಪಿಸಿ ತರಲಾಗಿತ್ತು. ಆದರೆ ಇದೀಗ ರವೀಂದ್ರನಾಥ್‌ ಠಾಗೋರ್‌ ಅವರ ಬಲಗಣ್ಣು ಕಳಚಿ ಹೋಗಿದ್ದು, ಕಣ್ಣಿನ ಗುಡ್ಡೆಯ ಭಾಗಕ್ಕೆ ಪೆಟ್ಟಾಗಿದೆ. ಮೂರ್ತಿಯನ್ನು ಹತ್ತಿರದಿಂದ ಸೂಕ್ಷ್ಮವಾಗಿ ಗಮನಿಸಿದರೆ ಕವಿಯ ಕಣ್ಣು ಗುಡ್ಡೆಗೆ ಪೆಟ್ಟಾಗಿರುವುದು ಪ್ರವಾಸಿಗರ ಗಮನಕ್ಕೆ ಬರುವಂತಾಗಿದೆ‌.

300x250 AD

ಈ ಬಗ್ಗೆ ನಗರಸಭೆಯು ತಕ್ಷಣವೇ ಎಚ್ಚೆತ್ತು, ಕವಿ ರವೀಂದ್ರನಾಥ್‌ ಠಾಗೋರರ ಮೂರ್ತಿಯನ್ನು ಶೀಘ್ರದಲ್ಲೇ ದುರಸ್ತಿಗೊಳಿಸಬೇಕು ಎಂಬುದು ಪ್ರವಾಸಿಗರ ಹಾಗೂ ಸ್ಥಳೀಯರ ಆಗ್ರಹವಾಗಿದೆ.

Share This
300x250 AD
300x250 AD
300x250 AD
Back to top