Slide
Slide
Slide
previous arrow
next arrow

ಅಂದರ್- ಬಾಹರ್ ಜೂಜು ಅಡ್ಡೆಗೆ ಪೊಲೀಸರ ದಾಳಿ

300x250 AD

ದಾಂಡೇಲಿ: ಸಾರ್ವಜನಿಕ ಸ್ಥಳದಲ್ಲಿ ಅಂದರ್- ಬಾಹರ್ ಜೂಜಾಟವಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿ, ನಾಲ್ವರನ್ನು ವಶಕ್ಕೆ ಪಡೆದು ನಗದನ್ನು ಜಪ್ತಿಪಡಿಸಿಕೊಂಡಿರುವ ಘಟನೆ ನಗರದ ಕುಳಗಿ ರಸ್ತೆಯಲ್ಲಿ ನಡೆದಿದೆ.

ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಹಣಕಟ್ಟಿ ಇಸ್ಪೀಟ್ ಎಲೆಯಾಟದಲ್ಲಿ ತೊಡಗಿದ್ದ ಖಚಿತ ಮಾಹಿತಿಯನ್ನಾಧರಿಸಿ ನಗರ ಠಾಣೆಯ ಪಿಎಸೈ ಐ.ಆರ್.ಗಡ್ಡೇಕರ್ ಅವರ ನೇತೃತ್ವದ ತಂಡ ದಾಳಿ ನಡೆಸಿತ್ತು.

300x250 AD

ಈ ವೇಳೆ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ತಂಡದಲ್ಲಿದ್ದ ಸುಭಾಷ್ ನಗರದ ನಿವಾಸಿ ಪರಶುರಾಮ ಬೋವಿವಡ್ಡರ್, ಕುಳಗಿ ರಸ್ತೆಯ ಈಶ್ವರ ದೇವಸ್ಥಾನ ಹತ್ತಿರದ ನಿವಾಸಿಗಳಾದ ಬಸವರಾಜ ಮಣ್ಣವಡ್ಡರ, ಸುರೇಶ ಕಲ್ಲವಡ್ಡರ ಹಾಗೂ ಕೋಗಿಲಬನ ಗ್ರಾಮದ ನಿವಾಸಿ ನಿಸಾರ್ ಖಾದ್ರಿ ಇವರುಗಳನ್ನು ವಶಕ್ಕೆ ಪಡೆದು ನಗದನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಆರೋಪಿಗಳ ಮೇಲೆ ಕಲಂ 87 ಕೆ.ಪಿ ಕಾಯ್ದೆಯಡಿ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ.

Share This
300x250 AD
300x250 AD
300x250 AD
Back to top