Slide
Slide
Slide
previous arrow
next arrow

ಸೆ.24ಕ್ಕೆ ಫಾಲ್ಗುಣ ಗೌಡರ ‘ಬಿಂಜೆಮುಳ್ಳು’ ಕವನ ಸಂಕಲನ ಬಿಡುಗಡೆ

300x250 AD

ಬೆಂಗಳೂರು: ಇಲ್ಲಿನ ವೀರಲೋಕ ಪ್ರಕಾಶನದ ಆಶ್ರಯದಲ್ಲಿ ಫಾಲ್ಗುಣ ಗೌಡರ ಬಿಂಜೆಮುಳ್ಳು ಕವನ ಸಂಕಲನ ಸೇರಿದಂತೆ ಐದು ಕವನ ಸಂಕಲನಗಳ ಲೋಕಾರ್ಪಣೆ ಸಮಾರಂಭ ‘ಕಾವ್ಯಕ್ರಮ’ ಕಾರ್ಯಕ್ರಮ ದಿನಾಂಕ ಸೆ.24ರ ಭಾನುವಾರ ಬೆಳಿಗ್ಗೆ 9.30 ಗಂಟೆಗೆ ಬೆಂಗಳೂರಿನ ಎನ್.ಆರ್.ಕಾಲೋನಿಯ ಡಾ.ಅಶ್ವಥ್ ಕಲಾಭವನದಲ್ಲಿ ನಡೆಯಲಿದೆ.

ಸಮಾರಂಭದಲ್ಲಿ ಖ್ಯಾತ ಸಾಹಿತಿಗಳಾದ ಜಯಂತ ಕಾಯ್ಕಿಣಿ, ಟಿ.ಎನ್.ಸೀತಾರಾಮ್, ಜೋಗಿ,ರಾಜಶೇಖರ ಮಠಪತಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ವಾಸುದೇವ ನಾಡಿಗರ ‘ನಿನ್ನ ಧ್ಯಾನದ ನೂರೊಂದು ಹಣತೆ’, ನಂದಿನಿ ಹೆದ್ದುರ್ಗ ಅವರ ‘ಒಂದು ಆದಿಮ ಪ್ರೇಮ’, ಫಾಲ್ಗುಣ ಗೌಡರ ‘ಬಿಂಜೆಮುಳ್ಳು’, ಸದಾಶಿವ ಸೊರಟೂರು ಅವರ ‘ಗಾಯಗೊಂಡ ಸಾಲುಗಳು’, ಪಾಪುಗುರು ಅವರ ‘ಮಣ್ಣೇ ಮೊದಲು’ ಸಂಕಲನಗಳು ಬಿಡುಗಡೆಯಾಗಲಿವೆ.

300x250 AD

ವೀರಕಪುತ್ರ ಶ್ರೀನಿವಾಸ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಆನಂದ ಮಾದಲಗೆರೆ ತಂಡದಿ0ದ ‘ಗೀತ ಗಾಯನ’ ಕಾರ್ಯಕ್ರಮ ನಡೆಯಲಿದೆ.

Share This
300x250 AD
300x250 AD
300x250 AD
Back to top