Slide
Slide
Slide
previous arrow
next arrow

ಪೌರ ಕಾರ್ಮಿಕರ ಮೇಲೆ ಹಲ್ಲೆ: ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

300x250 AD

ಶಿರಸಿ: ಕಾರವಾರ ನಗರದಲ್ಲಿ ನಗರ ಸಭೆ ಪೌರಕಾರ್ಮಿಕರಾದ ಚೇತನ್‌ಕುಮಾರ ವಿ ಕೋರಾರ ಮತ್ತು ಪುರುಷೋತ್ತಮ ಕೋರಗರವರ ಮೇಲೆ ಸ್ಥಳಿಯರಾದ ನಿತೀನ್ ಹರಿಕಾಂತ್ರ ಹಾಗೂ ನಿತೀಶ ಹರಿಕಾಂತ್ರ ಇವರು ಅವಾಚ್ಯ ಶಬ್ಧಗಳಿಂದ ನಿಂದಿಸಿ ತೀವ್ರವಾಗಿ ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದ್ದು ಇದನ್ನು ಡಾ. ಅಂಬೇಡ್ಕರ್ ಪ್ರಗತಿಪರ ದಲಿತ ವೇದಿಕೆ, ಉತ್ತರ ಕನ್ನಡ ಜಿಲ್ಲೆಯ ಸಮಸ್ಥ ಕೋರಾರ ಸಮಾಜ ಹಾಗೂ ಪೌರಕಾರ್ಮಿಕರು ಖಂಡಿಸಿದ್ದಾರೆ. ಹಲ್ಲೆಗೆ ಒಳಗಾದವರು ಪರಿಶಿಷ್ಟ ಜಾತಿಗೆ ಸೇರಿದ ಪೌರಕಾರ್ಮಿಕರಾಗಿದ್ದು, ಹಲ್ಲೆ ನಡೆಸಿದವರ ಮೇಲೆ ಪರಿಶಿಷ್ಠ ಜಾತಿ ಪಂಗಡದ ದೌರ್ಜನ್ಯ ಕಾಯಿದೆ ಅಡಿಯಲ್ಲಿ ಕೂಡಲೇ ಬಂಧಿಸಿ ಕಾನೂನು ರೀತಿಯ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ, ಪೊಲೀಸ್ ಅಧೀಕ್ಷಕರಿಗೆ ಮನವಿ ನೀಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top