• Slide
    Slide
    Slide
    previous arrow
    next arrow
  • ಜೀವನದ ಕಲೆಗೆ ಅವಶ್ಯವಾದದ್ದನ್ನು ಕಲಿಯಿರಿ: ಮಾರುತಿ ಗುರೂಜಿ

    300x250 AD


    ಹೊನ್ನಾವರ: ವಿದ್ಯಾರ್ಥಿಗಳ ಕಲಿಕೆ ಬರಿ ಪುಸ್ತಕಕ್ಕೆ ಸೀಮಿತವಾಗಿರಬಾರದು. ಜೀವನದ ಕಲೆಗೆ ಅವಶ್ಯವಿರುವುದೆಲ್ಲವನ್ನು ಕಲಿಯಬೇಕು ಎಂದು ಶ್ರೀಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ ಎಂಡ್ ಪಿಯು ಕಾಲೇಜಿನ ಕರಾಟೆ ಹಾಗೂ ಚೆಸ್ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾರುತಿ ಗುರೂಜಿ ಹೇಳಿದರು.
    ಕರಾಟೆ ಯಾವುದೇ ಆಯುಧಗಳಿಲ್ಲದೆ ಆತ್ಮ ರಕ್ಷಣೆಮಾಡಿಕೊಳ್ಳುವ ಕಲೆಯಾಗಿದ್ದು ಎಲ್ಲಾ ವಿದ್ಯಾರ್ಥಿಗಳಿಗೂ ಇದರ ಅವಶ್ಯಕತೆ ಇದ್ದು ಹೆಣ್ಣು ಮಕ್ಕಳಿಗೆ ತುಂಬಾ ಅನುಕೂಲಕರ ಅವಶ್ಯ ಕಲೆಯಾಗಿದೆ ಎಂದರು. ಹಾಗೇ ಚೆಸ್ ಸಹ ವಿದ್ಯಾರ್ಥಿಗಳಿಗೆ ಎಕಾಗ್ರತೆಯೊಂದಿಗೆ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತಮ್ಮ ಮಾತುಗಳಲ್ಲಿ ವಿವರಿಸಿದರು.

    ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ ಎಂಡ್ ಪಿ. ಯು. ಕಾಲೇಜ್ ವಿದ್ಯಾರ್ಥಿಗಳಿಗಾಗಿ ತಬಲ, ಸಂಗೀತ, ಭರತನಾಟ್ಯ, ಯಕ್ಷಗಾನ ಕಲೆಗಳ ತರಬೇತಿಯನ್ನು ನೀಡುತ್ತಿದ್ದು, ವಿದ್ಯಾರ್ಥಿಗಳ ಆಸಕ್ತಿಯನ್ನು ಮನಗಂಡು ಕರಾಟೆ ಹಾಗೂ ಚೆಸ್ ತರಗತಿಗಳನ್ನು ಆರಂಭಿಸಿದೆ. ಕಾರ್ಯದರ್ಶಿಗಳಾದ ಅರ್ಪಿತಾ ಮಾರುತಿ ಗುರೂಜಿ, ರಾಷ್ಟೀಯ ತರಬೇತುದಾರರಾದ ಪ್ರಭಾಕರ್, ಸಂಸ್ಥೆಯ ಆಡಳಿತಾಧಿಕಾರಿ ಮಂಜುನಾಥ ಎಮ್.ಎನ್., ಪ್ರಾಂಶುಪಾಲ ಎಸ್.ಜಾನ್ ಬೊಸ್ಕೊ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

    300x250 AD

    ರಾಷ್ಟ್ರೀಯ ತರಬೇತುದಾರರಾದ ಪ್ರಭಾಕರ್ ತಮ್ಮ ತಂಡದೊಂದಿಗೆ ತರಬೇತಿ ನೀಡಲು ಆಗಮಿಸಿದ್ದು ಕರಾಟೆಯ ಇತಿಹಾಸವನ್ನು ಸಂಕ್ಷಿಪ್ತವಾಗಿ ವಿವರಿಸುವುದರ ಜೊತೆಗೆ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ಸಭೆಯ ಕೊನೆಯಲ್ಲಿ ತರಬೇತಿ ತಂಡದವರು ವೇದಿಕೆಯ ಮೇಲೆ ಗೌರವವನ್ನು ಸ್ವೀಕರಿಸಿ ತರಗತಿಯನ್ನು ಆರಂಭಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top