Slide
Slide
Slide
previous arrow
next arrow

‘ಅಧಿವಕ್ತಾ ಪರಿಷತ್’ನ 30ನೇ ವರ್ಷದ ‘ಸಂಸ್ಥಾಪನಾ ದಿನಾಚರಣೆ’

300x250 AD

ಶಿರಸಿ: ‘ಅಧಿವಕ್ತಾ ಪರಿಷತ್’ನ 30ನೇ ವರ್ಷದ ‘ಸಂಸ್ಥಾಪನಾ ದಿನಾಚರಣೆ’ಯನ್ನು ಉತ್ತರ ಕನ್ನಡ ಘಟಕದಿಂದ ಹಿರಿಯ ವಕೀಲರಿಗೆ ಗೌರವ ನಮನ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು.
ಶಿರಸಿಯ ಹಿರಿಯ ವಕೀಲ ಪಿ.ಜಿ.ಹೆಗಡೆ ಜಾನ್ಮನೆ ದಂಪತಿ ಮನೆಗೆ ತೆರಳಿ ಸನ್ಮಾನಿಸಿ, ಸಿಹಿ ವಿತರಣೆ ಮಾಡಲಾಯಿತು. ಶ್ರೀಯುತರು 1960ರಲ್ಲಿ ತಮ್ಮ ವಕೀಲ ವೃತ್ತಿಯನ್ನು ಪ್ರಾರಂಬಿಸಿ ಇಂದಿಗೂ ಸಹ ಅವರ ಜನಪ್ರಿಯತೆ ಮಾಸಿಲ್ಲ. ಇಂದು ತಮ್ಮ 91ನೇ ವಯಸ್ಸಿನಲ್ಲೂ ನಮಗೆ ಮಾರ್ಗದರ್ಶನ ಮಾಡಿ, ತಾವು ಮಾಡುತ್ತಿರುವ ಕಾರ್ಯವು ಸಮಾಜ ಮತ್ತು ದೇಶ ಕಟ್ಟವು ನಿಟ್ಟಿನಲ್ಲಿ ಸಾಗಲಿ ಅಂತ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲ ವಿ.ಎಂ.ಹೆಗಡೆ, ಸರಸ್ವತಿ ಹೆಗಡೆ, ಅಧಿವಕ್ತಾ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಸಂತೋಷ ಜಿ.ಹೆಗಡೆ, ಕಾರ್ಯದರ್ಶಿ ಸತೀಶ್ ಜಿ ನಾಯ್ಕ್, ಆರ್.ವಿ.ಹೆಗಡೆ, ಮಂಜುನಾಥ್ ಗೌಡ, ಎನ್.ಆರ್.ನಾಯ್ಕ ಮತ್ತು ಪ್ರಶಾಂತ್ ನಾಯ್ಕ್ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top