Slide
Slide
Slide
previous arrow
next arrow

ನಿವೃತ್ತ ಶಿಕ್ಷಕ ವಿಘ್ನೇಶ್ವರ ಭಟ್ಟಗೆ ‘ಶಿಕ್ಷಕ ಭೂಷಣ’ ಬಿರುದು

300x250 AD

ಹೊನ್ನಾವರ: ಪ್ರೇರಣಾ ಫೌಂಡೇಶನ್ ಅರೇಅಂಗಡಿಯ ವತಿಯಿಂದ ನೀಲಕೋಡಿನ ನಿವೃತ್ತ ಶಿಕ್ಷಕ ವಿಘ್ನೇಶ್ವರ ಭಟ್ಟ ಬುಚ್ಚನ್ ಇವರಿಗೆ ‘ಶಿಕ್ಷಕ ಭೂಷಣ’ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷೆ ರಜನಿ ನಾಯ್ಕ ಮಾತನಾಡಿ, ‘ಪ್ರೇರಣಾ’ ನಮ್ಮೆಲ್ಲರ ಕನಸಿನ ಕೂಸು. ಈಗಷ್ಟೇ ಅಂಬೆಗಾಲಿಡುತ್ತಾ ನಡೆಯಲು ಪ್ರಾರಂಭಿಸಿದೆ. ಸಮಾನ ಮನಸ್ಕರೆಲ್ಲ ಸೇರಿ ಪ್ರಾರಂಭಿಸಿರುವ ಈ ಸಂಘಟನೆಯು ರಾಜಕೀಯದ ಹೊರತಾಗಿ ಸಮಾಜಕ್ಕಾಗಿ ದುಡಿದವರನ್ನು ಹುಡುಕಿ ಗೌರವಿಸುತ್ತಾ ಬಂದಿದ್ದೇವೆ ಎಂದು ಸಂಘಟನೆಯ ಕಾರ್ಯವೈಖರಿ ವಿವರಿಸಿದರು.
ಈ ವೇಳೆ ಸಂಘಟನೆಯ ಸದಸ್ಯರಾದ ಗಣಪತಿ ಭಟ್, ಸುಬ್ರಹ್ಮಣ್ಯ ಹೆಗಡೆ, ಶ್ರೀನಿವಾಸ ಶೆಟ್ಟಿ, ಕಿರಣ ಹೆಗಡೆ,ರವಿ ನಾಯ್ಕ, ವಿ.ಜಿ.ಹೆಗಡೆ, ಮಣಿಕಂಠ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top