• Slide
    Slide
    Slide
    previous arrow
    next arrow
  • ಕಬ್ಬಿಣದ ಗೇಟುಗಳನ್ನು ಕಳ್ಳತನ ನಡೆಸುತ್ತಿದ್ದ 6 ಆರೋಪಿಗಳ ಬಂಧನ

    300x250 AD

    ಶಿರಸಿ: ತಾಲೂಕಿನ ವಿವಿಧ ಭಾಗಗಳಲ್ಲಿ ಕಬ್ಬಿಣದ ಗೇಟುಗಳನ್ನು ಕಳ್ಳತನ ನಡೆಸುತ್ತಿದ್ದ 6 ಜನ ಆರೋಪಿಗಳನ್ನು ಇಲ್ಲಿನ ಗ್ರಾಮೀಣ ಠಾಣಾ ಪೊಲೀಸರು ಮಿಂಚಿನ ಕಾರ್ಯಾಚಣೆ ನಡೆಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ತಾಲೂಕಿನ ವಿವಿಧ ಭಾಗಗಳಲ್ಲಿ ಕಬ್ಬಿಣದ ಗೇಟುಗಳು ನಾಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣಾ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿ, ೧.೭೦ ಲಕ್ಷ ರೂ. ಮೌಲ್ಯದ ಒಟ್ಟೂ 17 ಕಬ್ಬಿಣದ ಗೇಟುಗಳು ಹಾಗೂ ಕೃತ್ಯಕ್ಕೆ ಬಳಸಲಾದ 2 ಟಾಟಾ ಏಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

    ದೀಪಕ ಶಿವಾಜಿ ಗೋಸಾವಿ, ತಂಗರಾಜ ಶ್ರವಣ ಜೂಂವಾ, ಮುನ್ನಾ ಭಾಷಾ ಸಾಬ್ ಶೇಖ್, ನದೀಮ್ ಇಬ್ರಾಹಿಂ ಸಾಬ್, ನಿಸಾಮ್ ಇಬ್ರಾಹಿಂ ನನ್ನೆ ಸಾಬ್, ಅರುಣ ಶಂಕರ ಗೋಸಾವಿ ಬಂಧಿತ ಆರೋಪಿಗಳಾಗಿದ್ದಾರೆ.

    300x250 AD

    ಡಿಎಸ್‌ಪಿ ಕೆ.ಎಲ್.ಗಣೇಶ ಮಾರ್ಗದರ್ಶನದಲ್ಲಿ ಪಿಐ ಸೀತಾರಾಮ ಪಿ., ತನಿಖಾ ಪಿಎಸ್‌ಐ ದಯಾನಂದ ಜೊಗಳೇಕರ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಇದ್ದರು. ಈ ಬಗ್ಗೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top