• Slide
    Slide
    Slide
    previous arrow
    next arrow
  • ಪ್ರೌಢಶಾಲೆಯ ಅಭಿವೃದ್ಧಿಗೆ ಕೆಲಸ ಮಾಡಿದ ಅಧ್ಯಕ್ಷರ ಕಾರ್ಯ ಮೆಚ್ಚುವಂತದ್ದು: ಅರುಣ್ ದೇಸಾಯಿ ಶ್ಲಾಘನೆ

    300x250 AD

    ಜೊಯಿಡಾ: ಸಾರ್ವಜನಿಕ ಜೀವನದಲ್ಲಿ ನಿಷ್ಠೆಯಿಂದ ಕೆಲಸ ಮಾಡುವವರು ಸಿಗುವುದು ವಿರಳ. ಆದರೆ ಅತ್ಯಂತ ಪ್ರಾಮಾಣಿಕವಾಗಿ ಕಳೆದ ಹತ್ತು ವರ್ಷಗಳಿಂದ ಪ್ರೌಢಶಾಲೆಯ ಅಭಿವೃದ್ಧಿಗೆ ಕೆಲಸ ಮಾಡಿದ ಅಧ್ಯಕ್ಷರ ಸೇವೆ ಮೆಚ್ಚಲೇಬೇಕು ಎಂದು ನಂದಿಗದ್ದಾ ಗ್ರಾ.ಪಂ ಅಧ್ಯಕ್ಷ ಅರುಣ ದೇಸಾಯಿ ಹೇಳಿದರು.

    ಅವರು ಗುಂದ ಪ್ರೌಢಶಾಲೆಯ ನೂತನ ಆಡಳಿತ ಮಂಡಳಿ ನಿರ್ಗಮಿಸುತ್ತಿರುವ ಅಧ್ಯಕ್ಷ ಸದಾನಂದ ಉಪಾಧ್ಯ ಅವರಿಗೆ ನೀಡಿದ ಗೌರವ ಸನ್ಮಾನದಲ್ಲಿ ಭಾಗವಹಿಸಿ ಮಾತನಾಡುತ್ತಾ, ನಮ್ಮ ಗ್ರಾಮ ಪಂಚಾಯತದಿಂದ ನಮ್ಮೂರ ಪ್ರೌಢಶಾಲೆಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದೇವೆ. ಮುಂದೆಯೂ ಕೂಡಾ ಅದನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು.

    300x250 AD

    ಸನ್ಮಾನ ಸ್ವೀಕರಿಸಿ ಮಾತನಾಡಿದ ಸದಾನಂದ ಉಪಾಧ್ಯ, ಪ್ರೌಢಶಾಲೆಯ ಅಭಿವೃದ್ಧಿ ನಮ್ಮ ಶಾಸಕ ಆರ್.ವಿ.ದೇಶಪಾಂಡೆ ಅವರ ಸಹಕಾರದಿಂದ ಮಾಡಿದ್ದೇವೆ. ಗ್ರಾಮ ಪಂಚಾಯತ ಮತ್ತು ಪ್ರೌಢಶಾಲೆಯ ಶಿಕ್ಷಕ ವೃಂದ ಕೂಡ ಕೈಜೋಡಿಸಿದ್ದಾರೆ. ಆ ಮೂಲಕ ಇಷ್ಟು ಬೆಳವಣಿಗೆ ಸಾಧ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಅಧ್ಯಕ್ಷ ಅನಂತ ದೇಸಾಯಿ ಮಾತನಾಡಿ, ಯಾವುದೇ ಸಂಸ್ಥೆಯ ಬೆಳವಣಿಗೆ ಎಲ್ಲರ ಸಹಕಾರದಿಂದ ಮಾತ್ರ ಸಾಧ್ಯ ಮುಂದೆಯೂ ನಾವು ಗ್ರಾ.ಪಂ ಸಹಕಾರ ಬಯಸುತ್ತೇವೆ ಎಂದರು. ಮುಖ್ಯೋಪಾಧ್ಯಾಯ ಜೋಸೆಫ್ ಗೊನ್ಸಾಲ್ವೆಸ್, ಶಿಕ್ಷಕರಾದ ಫಕೀರಪ್ಪ ದರಿಗೊಂಡ, ದಿವ್ಯಾ ಚೌಹಾಣ್, ಪುರುಷೋತ್ತಮ ಎಚ್.ಜಿ., ಗೋಕುಲ್ ಸ್ಥಳೇಕರ ಸಾಂದರ್ಭಿಕವಾಗಿ ಮಾತನಾಡಿ ಸಹಕರಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top