• Slide
    Slide
    Slide
    previous arrow
    next arrow
  • ಸಮಾಜ ಇನ್ನೂ ಸುಧಾರಣೆ ಆಗಬೇಕಿದೆ: ಶಾಸಕ ಭೀಮಣ್ಣ

    300x250 AD

    ಶಿರಸಿ: ತಂದೆ- ತಾಯಿ ಸಂರಕ್ಷಣೆ, ಹಿರಿಯರನ್ನು ಗೌರವಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು. ಸಮಾಜ ಇನ್ನೂ ಸುಧಾರಣೆ ಆಗಬೇಕಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
    ಅವರು ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸದ್ಭಾವನ ಸಭಾಭವನದಲ್ಲಿ ಸಕಾರಾತ್ಮಕ ಫರಿವರ್ತನಾ ವರ್ಷ ಹಾಗೂ ರಕ್ಷಾಬಂಧನ ಸಪ್ತಾಹದ ಶುಭಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಸಮಾಜ ಸುಧಾರಣೆ ನಮ್ಮೊಬ್ಬರಿಂದ, ಅಕ್ಕಂದಿರೊಬ್ಬರಿ0ದ ಆಗುವಂತಹದ್ದಲ್ಲ. ಇಲ್ಲಿ ಸೇರಿರುವ ಎಲ್ಲ ಅಕ್ಕ, ಅಣ್ಣಂದಿರಿ0ದ ಆಗಬೇಕು. ಆಗ ಸಮಾಜದಲ್ಲಿ ಒಳ್ಳೆಯ ಕೆಲಸ, ಸಂಸ್ಕಾರ ಬೆಳೆಯಲು ಸಾಧ್ಯವಾಗಲಿದೆ ಎಂದರು.
    ಶಾಸಕ ಭೀಮಣ್ಣ ನಾಯ್ಕ ಅವರಿಗೆ ರಕ್ಷಾಬಂಧನದ ಶ್ರೀರಕ್ಷೆ ಕಟ್ಟಿದ ರಾಜಯೋಗಿನಿ ಬಿ.ಕೆ. ವೀಣಾಜಿ, ಈಶ್ವರೀಯ ಸಂದೇಶವನ್ನು ನೀಡಿದರು. ಕಾರ್ಯಕ್ರಮದಲ್ಲಿ ಐಎಂಎ ಅಧ್ಯಕ್ಷ ಡಾ.ರಾಮಾ ಹೆಗಡೆ, ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ ಹೆಗಡೆ ಹಾಗೂ ಪ್ರಮುಖರು ಮತ್ತು ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top