Slide
Slide
Slide
previous arrow
next arrow

ಸೆ.1ಕ್ಕೆ ‘ಉಚಿತ ಪಂಚಗವ್ಯ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ’

300x250 AD

ಶಿರಸಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಗೋಸೇವಾ ಗತಿವಿಧಿ, ಶಿರಸಿ ವಿಭಾಗ ವತಿಯಿಂದ ಶ್ರೀ ಮಾಗೋ ಪ್ರಾಡಕ್ಟ್ಸ್ ಪ್ರೈ.ಲಿಮಿಟೆಡ್ ಬೆಂಗಳೂರು ಇವರ ಸಹಯೋಗದಲ್ಲಿ ‘ಉಚಿತ ಪಂಚಗವ್ಯ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ’ವನ್ನು ಸೆ.01 ಶುಕ್ರವಾರ ಬೆಳಿಗ್ಗೆ 10.30ರಿಂದ ಸಾಯಂಕಾಲ 5.00 ಘಂಟೆವರೆಗೆ ನಗರದ ಅಂಬಾಗಿರಿ ಮಠದ ಆವಾರದಲ್ಲಿ ಏರ್ಪಡಿಸಲಾಗಿದೆ.

ಮನುಷ್ಯರಿಗೆ ಬರುವ ಜ್ವರ, ರಕ್ತದೊತ್ತಡ, ಸಿಹಿಮೂತ್ರ, ವಾಂತಿಭೇದಿ, ಮೂಲವ್ಯಾಧಿ, ಅಲರ್ಜಿ, ಸಂಧಿವಾತ, ನೆಗಡಿ, ಮೈಕೈನೋವು, ಕ್ಯಾನ್ಸರ್, ಹೃದಯಸಂಬಂಧಿ ಖಾಯಿಲೆ, ನಿದ್ರಾಹೀನತೆ, ಸೋರಿಯಾಸಿಸ್, ಅರೆತಲೆನೋವು, ಚರ್ಮರೋಗ, ಮೂರ್ಛೆರೋಗ, ಅಶಕ್ತತೆ, ದೃಷ್ಟಿನೇತ್ರ ಸಮಸ್ಯೆ, ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರುವಿಕೆ, ಬುದ್ಧಿಮಾಂದ್ಯತೆ, ನರಗಳ ದೌರ್ಬಲ್ಯ, ಸ್ತ್ರೀ ರೋಗಗಳು ಹೀಗೆ ಬಹುತೇಕ ಎಲ್ಲ ರೋಗಗಳಿಗೆ ಪಂಚಗವ್ಯ ಔಷಧಿಗಳು ಅದ್ಭುತ ಪರಿಣಾಮದ ಶಕ್ತಿ ಹೊಂದಿದ್ದು, ಪಂಚಗವ್ಯ ಆಯುರ್ವೇದ ಔಷಧಿಗಳಲ್ಲಿ ಆಳವಾಗಿ ಅಧ್ಯಯನ ಮಾಡಿದ ಪ್ರಸಿದ್ಧ ಕ್ಯಾನ್ಸರ್ ತಜ್ಞ ಡಾಕ್ಟರ್ ಡಿಪಿ ರಮೇಶ್ ಬೆಂಗಳೂರು ರೋಗಿಗಳನ್ನು ಉಚಿತವಾಗಿ ತಪಾಸಣೆ ಮಾಡಲಿದ್ದಾರೆ.

ಶಿಬಿರದ ಸ್ಥಳದಲ್ಲಿ ಗವ್ಯೋತ್ಪನ್ನ ವಸ್ತುಗಳು ಮತ್ತು ಔಷಧಿಗಳು ಮಾರಾಟಕ್ಕೆ ಲಭ್ಯವಿದ್ದು, ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸಂಘಟಕರು ಕೋರಿದ್ದಾರೆ.

300x250 AD

ಹೆಚ್ಚಿನ‌ ಮಾಹಿತಿಗಾಗಿ ವಿನಾಯಕ ಕಾನಳ್ಳಿ, ಸುಬ್ರಾಯ ತ್ಯಾಗಲಿTel:+919481461689, ನಾಗೇಶ್ ಶಿರಸಿ Tel:+917483040667,‌ ಗಣಪತಿ ಯಲ್ಲಾಪುರ Tel:+918762759240, ರಮಾನಂದ ಹೆಗಡೆ Tel:+919481800886 ಸಂಪರ್ಕಿಸಲು ಕೋರಿದೆ.

Share This
300x250 AD
300x250 AD
300x250 AD
Back to top