• Slide
    Slide
    Slide
    previous arrow
    next arrow
  • ಬಾವಿಗೆ ಬಿದ್ದು ಬಾಲಕಿ ಮೃತ: ಕುಟುಂಬಸ್ಥರ ಆಕ್ರಂದನ

    300x250 AD

    ಕಾರವಾರ: ನಗರದ ಹರಿದೇವ ನಗರದ ಮನೆಯೊಂದರ ಬಾವಿಯಲ್ಲಿ 3 ವರ್ಷದ ಬಾಲಕಿಯೋರ್ವಳು ಕಾಲು ಜಾರಿ ಬಿದ್ದು ಮೃತಪಟ್ಟಿರುವ ದುರ್ಘಟನೆ ನಡೆದಿದೆ.

    ಮನೆಯ ಬಳಿ ಆಟವಾಡುತ್ತಿದ್ದ ಸ್ತುತಿ ಗಣಪತಿ ಮೂರ್ತಿ ಎಂಬ ಬಾಲಕಿ ಆಟವಾಡುತ್ತ ಮಣ್ಣನ್ನು ಬಾವಿಯಲ್ಲಿ ಹಾಕಲು ಮುಂದಾಗಿದ್ದಾಳೆ. ಈ ವೇಳೆ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ.

    ಮನೆ ಮುಂದೆ ಆಟವಾಡುತ್ತಿದ್ದ ಮಗು ಕಾಣದಿದ್ದಾಗ ಗಾಬರಿಗೊಂಡ ಪೋಷಕರು ಸುತ್ತಮುತ್ತ ಹುಡುಕಾಟ ನಡೆಸಿದ್ದು, ಎಲ್ಲೂ ಕಾಣಿಸದೇ ಇದ್ದಾಗ ಕೊನೆಗೆ ಬಾವಿಯೊಳಗೆ ನೋಡಿದ್ದು, ಆಗ ಬಾವಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.

    300x250 AD

    ನಂತರ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲೇ ಮಗು ಉಸಿರುಗಟ್ಟಿ ಮೃತಪಟ್ಟಿದೆ. ಸ್ಥಳಕ್ಕೆ ಕಾರವಾರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ

    Share This
    300x250 AD
    300x250 AD
    300x250 AD
    Leaderboard Ad
    Back to top