• Slide
    Slide
    Slide
    previous arrow
    next arrow
  • ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಫರ್ಧೆ ಆಯೋಜನೆ

    300x250 AD

    ಯಲ್ಲಾಪುರ: ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಸುಜ್ಞಾನ ಫೌಂಡೇಶನ್ (ರಿ) ಯಲ್ಲಾಪುರ ಹಾಗೂ ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ವತಿಯಿಂದ ಉತ್ತರಕನ್ನಡ ಜಿಲ್ಲಾ ಮಟ್ಟದ ಮುದ್ದುಕೃಷ್ಣವೇಷ ಫೋಟೋ ಸ್ಫರ್ಧೆ-2023 ಆಯೋಜಿಸಲಾಗಿದೆ. ಈ ಸ್ಫರ್ಧೆಯಲ್ಲಿ ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ 6 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದ್ದು, ಆಸಕ್ತ ಪಾಲಕರು ಈ ಸ್ಪರ್ಧೆಗೆಂದೇ ತೆಗೆದ ತಮ್ಮ 6 ವರ್ಷದೊಳಗಿನ ಮಕ್ಕಳ ಮುದ್ದುಕೃಷ್ಣ ವೇಷದ ಭಾವಚಿತ್ರವನ್ನು ಕಳಿಸಲು ಕೋರಲಾಗಿದೆ. ಹಳೆಯ ಭಾವ ಚಿತ್ರಗಳಿಗೆ ಅವಕಾಶವಿಲ್ಲ. ಫೋಟೋ ಕಳಿಸಲು ಸೆ.2 ಕೊನೆಯ ದಿನವಾಗಿದೆ. ತೀರ್ಪುಗಾರರು ಸ್ಪರ್ಧೆಗೆ ಬಂದ ಫೋಟೋಗಳನ್ನು ಪರಿಶೀಲಿಸಿ ಸ್ಪರ್ಧಾ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ.

    ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿಜೇತರಿಗೆ ನಗದು ಬಹುಮಾನ, ಪಾರಿತೋಷಕ, ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುವುದು. ಹತ್ತು ಸಮಾಧಾನಕರ ಬಹುಮಾನ ವಿಜೇತರಿಗೆ ಪಾರಿತೋಷಕ, ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುವುದು. ತೀರ್ಪುಗಾರರ ನಿರ್ಣಯವೇ ಅಂತಿಮವಾಗಿದೆ. ಆಸಕ್ತ ಪಾಲಕರು ತಮ್ಮ 6 ವರ್ಷದೊಳಗಿನ ಮಕ್ಕಳ ಮುದ್ದುಕೃಷ್ಣ ವೇಷದ ಫೋಟೋಗಳನ್ನು ವಾಟ್ಸಪ್ ನಂಬರ್-Tel:+918431662869 ಗೆ ಕಳಿಸಬೇಕು. ಹೆಚ್ಚಿನ ಮಾಹಿತಿಗಾಗಿTel:+917899588538 ನಂಬರ್ ಅನ್ನು ಸಂಪರ್ಕಿಸಬೇಕು ಎಂದು ಸುಜ್ಞಾನ ಫೌಂಡೇಶನ್ (ರಿ) ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top