Slide
Slide
Slide
previous arrow
next arrow

ಕಡವೆ ಕೈಬಿಡದ ಜನ; ಗೋಪಾಲಕೃಷ್ಣ ವೈದ್ಯರ ಬಣದ 14 ಅಭ್ಯರ್ಥಿಗಳಿಗೆ ಪ್ರಚಂಡ ಗೆಲುವು

300x250 AD

ಶಿರಸಿ: ಇಲ್ಲಿನ ಪ್ರತಿಷ್ಠಿತ ಟಿಎಸ್ಎಸ್ ಸಂಸ್ಥೆಯ ಚುನಾವಣೆಯಲ್ಲಿ ಗೋಪಾಲಕೃಷ್ಣ ವೈದ್ಯರ ತಂಡ ಪ್ರಚಂಡ ಗೆಲುವು ಸಾಧಿಸಿದ್ದಾರೆ. ಜನರು ಭಾರೀ ಬದಲಾವಣೆ ಬಯಸಿದ್ದರೂ ಸಹ ಕಡವೆ ರಾಮಕೃಷ್ಣ ಹೆಗಡೆಯವರನ್ನು ಮಾತ್ರ ಜನ ಕೈಬಿಡಲಿಲ್ಲ.

‘ಅ’ ವರ್ಗದ ಪ್ರಾಥಮಿಕ ಸೊಸೈಟಿ ಕ್ಷೇತ್ರದಲ್ಲಿ 4 ಅಭ್ಯರ್ಥಿಗಳು, ಹಿಂದುಳಿದ ವರ್ಗ ‘ಅ’ ಮೀಸಲು, ಹಿಂದುಳಿದ ವರ್ಗ ‘ಬ’ ಮೀಸಲು, ಸಾಮಾನ್ಯ ಮಹಿಳಾ ಕ್ಷೇತ್ರದಲ್ಲಿ 2 ಹಾಗು ಸಾಮಾನ್ಯ ವರ್ಗದಲ್ಲಿ ಗೋಪಾಲಕೃಷ್ಣ ವೈದ್ಯರ ಬಣದ 6 ಅಭ್ಯರ್ಥಿಗಳು ಸೇರಿ ಒಟ್ಟೂ 14 ಅಭ್ಯರ್ಥಿಗಳು ವಿಜಯದ ನಗೆಯನ್ನು ಬೀರಿದ್ದಾರೆ.

300x250 AD

‘ಅ’ ವರ್ಗದ ಸೊಸೈಟಿಯಲ್ಲಿ ವಿಭಾಗದಲ್ಲಿ ಮುಂಡಗನಮನೆ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ 2500 ಮತ, ಸೋಂದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗಣಪತಿ ಜೋಶಿ 2008 ಮತ, ಸಾಲ್ಕಣಿ ಸೇವಾ ಸಹಕಾರಿ ಸಂಘದ ಪುರುಷೋತ್ತಮ ಹೆಗಡೆ 1734 ಮತ, ಹುಳಗೋಳ ಆರ್.ಡಿ ಸೊಸೈಟಿ ಅಧ್ಯಕ್ಷ ಡಿ.ಎಸ್.ಹೆಗಡೆ 1765 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.

Share This
300x250 AD
300x250 AD
300x250 AD
Back to top