Slide
Slide
Slide
previous arrow
next arrow

‘ಅಭಿನವ ಕಗ್ಗ ಕವಿ’ ಪ್ರಶಸ್ತಿಗೆ ಸಾಹಿತಿ ಕೃಷ್ಣ ಪದಕಿ ಆಯ್ಕೆ

300x250 AD

ದಾಂಡೇಲಿ: ಸ್ವಾತಂತ್ರ‍್ಯೋತ್ಸವದ ಪ್ರಯುಕ್ತ ದಾಂಡೇಲಿಯ ಮಾಸ್ಕೇರಿ ಸಾಹಿತ್ಯರಾಧನಾ ವೇದಿಕೆಯು ಕೊಡಮಾಡುವ ‘ಅಭಿನವ ಕಗ್ಗ ಕವಿ’ ಪ್ರಶಸ್ತಿಗೆ ಸಾಹಿತಿ ಕೃಷ್ಣ್ಣ ದತ್ತಾತ್ರೇಯ ಪದಕಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ, ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ ಪ್ರಕಟಿಸಿದ್ದಾರೆ.

ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅನುಪಮ ಸೇವೆಯನ್ನು ಸಲ್ಲಿಸಿರುವ ಸಾಹಿತಿ, ಸಂಘಟಕ ಶಿರಸಿಯ  ಕೃಷ್ಣ್ಣ ದತ್ತಾತ್ರೇಯ ಪದಕಿ ಅವರನ್ನು ಸಂಸ್ಥೆಯ “ಅಭಿನವ ಕಗ್ಗ ಕವಿ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಆಗಸ್ಟ್ 20ರಂದು ಮಧ್ಯಾಹ್ನ 3 ಗಂಟೆಗೆ ಶಿರಸಿಯ ನೆಮ್ಮದಿ ಆವರಣದ ರಂಗಧಾಮದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಮುಖ ಸಾಹಿತಿಗಳ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಮಾಸ್ಕೇರಿ ಎಂ.ಕೆ.ನಾಯಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top