Slide
Slide
Slide
previous arrow
next arrow

ಹೆಗಡೇಕಟ್ಟಾದಲ್ಲಿ ಸ್ವಾತಂತ್ರ್ಯೋತ್ಸವ, ಸನ್ಮಾನ ಕಾರ್ಯಕ್ರಮ

300x250 AD

ಶಿರಸಿ: ತಾಲೂಕಿನ ಹೆಗಡೆಕಟ್ಟಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಳಿಗ್ಗೆ 8:00 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಪಂಚ ಪ್ರಾಣ ಪ್ರತಿಜ್ಞೆ ಸ್ವೀಕಾರ ನಡೆಯಿತು. ತದ ನಂತರ ಸಭೆಯಲ್ಲಿ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಹಾಗೂ ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದೇವರು ಹೆಗಡೆಯವರ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರ ಕುಟುಂಬದವರು, ಊರ ನಾಗರಿಕರು.ಪಾಲಕ ಪೋಷಕರು,ಎಸ್,ಡಿ, ಎಂ,ಸಿ ಸದಸ್ಯರು, ಶಿಕ್ಷಕವೃಂದ,ವಿದ್ಯಾರ್ಥಿಗಳು ಹಾಜರಿದ್ದರು.ವೇದಿಕೆಯ ಅಧ್ಯಕ್ಷತೆಯನ್ನು ನೂತನ ಎಸ್,ಡಿ, ಎಂ,ಸಿ ಅಧ್ಯಕ್ಷ ಮಂಜುನಾಥ ಹೆಗಡೆ ವಹಿಸಿಕೊಂಡಿದ್ದರು. ಅತಿಥಿಗಳಾಗಿ ಎಂ,ಆರ್,ಹೆಗಡೆ, ಪ್ರಭಾಕರ ಹೆಗಡೆ, ಶ್ರೀಮತಿ ಆರತಿ ಹೆಗಡೆ, ಶ್ರೀಮತಿ ಉಮಾಬಾಯಿ ಹೆಗಡೆ ಆಗಮಿಸಿದ್ದರು. ದೇವರು ಹೆಗಡೆ ದಂಪತಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರ್ವಹಣೆಯನ್ನು ನಾಗರಾಜ ಹರಿಕಂತ್ರ, ಸ್ವಾಗತವನ್ನು ಸತೀಶ ಹೆಗಡೆ. ವಂದನಾರ್ಪಣೆಯನ್ನು ಶ್ರೀಮತಿ ಮಹಾಲಕ್ಷ್ಮಿ ನಡೆಸಿಕೊಟ್ಟರು.

300x250 AD
Share This
300x250 AD
300x250 AD
300x250 AD
Back to top