• Slide
    Slide
    Slide
    previous arrow
    next arrow
  • ಆ‌.15ಕ್ಕೆ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಸ್ವಾತಂತ್ರ್ಯ ಸಂಭ್ರಮ’ ಕಾರ್ಯಕ್ರಮ

    300x250 AD

    ಶಿರಸಿ: ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಯಲ್ಲಾಪುರ ರಸ್ತೆಯ ಅಂಬೇಡ್ಕರ್ ಭವನದಲ್ಲಿ ಆ.15, ಸಂಜೆ 4 ಗಂಟೆಗೆ ‘ಸ್ವಾತಂತ್ರ್ಯ ಸಂಭ್ರಮ- ಹಿರಿಯ ಸ್ವಾತಂತ್ರ ಹೋರಾಟಗಾರರಿಗೆ ಕೃತಜ್ಞತಾ ಗೌರವ ಹಾಗೂ ನಿವೃತ್ತ ಯೋಧರಿಗೆ ಅಭಿಮಾನಪೂರ್ವಕ ಸನ್ಮಾನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

    ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕಾಶೀನಾಥ ಮೂಡಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅನಂತಮೂರ್ತಿ ಹೆಗಡೆ ವಹಿಸಲಿದ್ದಾರೆ. ತಹಶಿಲ್ದಾರ್ ಶ್ರೀಧರ ಮುಂದಲಮನಿ, ಚಿಂತಕ ಶಿವಾನಂದ ಕಳವೆ ಘನ ಉಪಸ್ಥಿತಿ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಡಿಎಫ್ಒ ಅಜ್ಜಯ್ಯ ಆರ್., ಡಿವೈಎಸ್ಪಿ ಕೆ.ಎಲ್.ಗಣೇಶ್, ಎಮ್ಇಎಸ್ ಅಧ್ಯಕ್ಷ ಜಿ.ಎಮ್.ಹೆಗಡೆ ಮುಳಖಂಡ, ಆರ್.ಎಫ್.ಒ. ಶಿವಾನಂದ ನಿಂಗಾಣಿ, ಸ್ಕಾಡವೇಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ್, ಮನುವಿಕಾಸ ಟ್ರಸ್ಟಿ ಗಣಪತಿ ಭಟ್ ಆಗಮಿಸಲಿದ್ದಾರೆ. ಸಹಾಯಕ ನಿರ್ವಾಹಕ‌ ಇಂಜಿನಿಯರ್ ವಿ.ಎಂ.ಭಟ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

    ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಬೇಕೆಂದು ಅಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top