Slide
Slide
Slide
previous arrow
next arrow

ಸ್ವಾತಂತ್ರ್ಯೋತ್ಸವ: ಆ.12ಕ್ಕೆ ಮುಕ್ತ ‘ಚದುರಂಗ’ ಸ್ಪರ್ಧೆ

300x250 AD

ಕಾರವಾರ: 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಬಾಲಕ- ಬಾಲಕಿಯರಿಗಾಗಿ ಮುಕ್ತ ‘ಚದುರಂಗ’ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯನ್ನು ಆ.12ರಂದು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುವುದು.
ತಾಲೂಕಿನಲ್ಲಿ ವಿಜೇತರಾದ ಪ್ರತಿ ವಿಭಾಗಕ್ಕೆ ಒಬ್ಬರಂತೆ 4 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಆಗಸ್ಟ್ 14ರಂದು ಕಾರವಾರದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರತಿ ವಿಭಾಗದಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನಗಳನ್ನು ಸ್ವಾತಂತ್ರ್ಯೋತ್ಸವ ದಿನದಂದು ವಿತರಿಸಲಾಗುವುದು.
ಆಸಕ್ತ ಬಾಲಕ- ಬಾಲಕಿಯರು ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಗಳಾದ ಕಾರವಾರದ ಶಾನೂರಲಿ-tel:+919590318322, ಅಂಕೋಲಾದ ಪ್ರಶಾಂತ ಗಾಂವಕರ್-tel:+919902352618, ಕುಮಟಾದ ಶಾರದಾ ನಾಯ್ಕ-tel:+918618235935, ಹೊನ್ನಾವರದ ಸುಧೀಶ ನಾಯ್ಕ-tel:+919448530726, ಭಟ್ಕಳದ ನಾಗರಾಜ ಪಟಗಾರ-tel:+919448995841, ಶಿರಶಿಯ ಕಿರಣ ನಾಯ್ಕ-tel:+919449801404, ಸಿದ್ದಾಪುರದ ಮಾಧವ ನಾಯ್ಕ-tel:+919449360803, ಯಲ್ಲಾಪುರದ ನಾರಾಯಣ ನಾಯಕ-tel:+919986221280, ಮುಂಡಗೋಡದ ಹನುಮಂತ ವಡ್ಡರ-tel:+918105464657, ಹಳಿಯಾಳದ ಶಿವಾನಂದ ಆರ್.-tel:+917019565606, ಜೊಯಿಡಾದ ತುಕಾರಾಮ ಗೌಡ-tel:+919945489193, ದಾಂಡೇಲಿಯ ಮಮತಾ ಕೇಳೋಜಿ- tel:+918971873968ಗೆಸಂಪರ್ಕಿಸಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top